ಗುರುವಾರ, ಆಗಸ್ಟ್ 20, 2015

ಅವಳ ಕನಸು

ಭಾಗ ೩

ಜಗನ್ ಬಸವನಗುಡಿ ತಲುಪಿದ ........ ಜಗನ್ ಕಾರ್ ಇಳಿದು ವೆಂಕಣ್ಣ ( ಆತ್ಮಹತ್ಯೆ ಮಾಡಿಕೊಂಡಿದ್ದಳೆ ಎಂದು ಹೇಳಿರುವ ಹುಡುಗಿಯ ಅಪ್ಪ) ಅವರ ಮನೆ ಎದುರಿಗೆ ಬಂದು ನಿಂತು ಆ ಕಡೆ ಈ ಕಡೆ ಕಣ್ಣಾಡಿಸಿದ ಅಲ್ಲಿ ಯಾರು ಇರಲೇ ಇಲ್ಲಾ ಅಲ್ಲಿ ಎಲ್ಲವು ಸರ್ವೆ ಸಾಮಾನ್ಯ ಸ್ಥಿತಿಯಲ್ಲಿ ಇದ್ದುದನ್ನು ಕಂಡು ಇದೇನಿದು.....!!!!!! ವೆಂಕಣ್ಣನ ಮನೆಗೆ ಬೀಗ ಹಾಕ್ಕಿತ್ತು ಮನೆಯಲ್ಲಿ ಯಾರು ಇರಲೇ ಇಲ್ಲ ಅಲ್ಲೆ ಪಕ್ಕದಲ್ಲಿ ಇದ್ದ ಕೆಂಪಣ್ಣ ( ವೆಂಕಣ್ಣ ನ ಅಣ್ಣ ಸುಮಾರು ೭೫ ವರ್ಷದ ಅಜ್ಜ) ನ ಜಗನ್ ಕೇಳಿದ...... ತಾತ ಇಲ್ಲಿ ಯಾವುದೊ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಸುದ್ದಿ ಬಂತು ನಿಮಗೇನಾದ್ರು ಗೊತ್ತಾ ಅಂದ....??? ಇಲ್ಲಾ .....??? ಇಲ್ಲಿ ಯಾರು ಇಲ್ಲಾ ಸ್ವಾಮಿ... ಹೌದ ...ಇಲ್ಲೆ ಅಂತ ಹೇಳಿದ್ರಲ್ಲ ಅಜ್ಜ ಇದು ಕೆಂಪಣ್ಣ ಅವರ ಮನೆ ಅಲ್ವಾ ಹೌದು ಅವರ ಮನೆನೇ ಕಣ್ಣಪ್ಪ ......ನಾನು ಅವರ ಅಣ್ಣ ಅವರು ಮನೆಲ್ಲಿ ಇಲ್ಲಾ ಊರಿಗೆ ಹೋಗಿ ೧೦ ದಿನ ಆಯ್ತು ಕಣ್ಣಪ್ಪ ... ಮತ್ತೆ ಹುಡುಗಿ ಆತ್ಮಹತ್ಯೆ ಮಾಡ್ಕೊಂಡಿದ್ದಾಳೇ ಅಂತ ಯಾರು ಫೋನ್ ಮಾಡಿದ್ದು... ಇದು ಯಾವುದೋ ಸುಳ್ಳು ಸುದ್ದಿ ಅಂತ ಮ್ಯಾನೇಜರ್ ಗೆ ಫೋನ್ ಮಾಡಿ ಹೇಳುತ್ತಾನೆ. ಸರ್ ಇಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಯಾರೋ ಸುಳ್ಳು ಸುದ್ದಿ ಕೊಟ್ಟಿದ್ದಾರೆ ಅಂದ. ಸರಿ ನೀವು ಬನಶಂಕರಿಗೆ ಹೋಗಿ ಅಲ್ಲಿ ಮುಖ್ಯಮಂತ್ರಿಗಳದ್ದು ಭಾಷಣ ಇದೆ ಅಂತ ಹೇಳಿದರು. ಸರಿ ಸರ್ ಅಲ್ಲಿಗೆ ಹೋಗಿ ರಿಪೋರ್ಟ್ ತಗೊಂಡು ಬರ್ತೀನಿ ಅಂತ ಹೇಳಿ ಜಗನ್ ಹೊರಟ ..... ಬಸವನಗುಡಿಯಿಂದ ಬನಶಂಕರಿಕಡೆಗೆ ೩೦ ನಿಮಿಷಗಳ ಪ್ರಯಾಣ. ಜಗನ್ ಗೆ ಆ ಹಳದಿ ಬಣ್ಣದ ಸೀರೆಯುಟ್ಟ ಹುಡುಗಿಯ ನೆನಪು ಬಿಟ್ಟರೆ ಬೇರೆ ಯಾವ ಯೋಚನೆ ಅವನ ತಲೆಯಲ್ಲಿ ಇರಲೇ ಇಲ್ಲ. ಈ ದಿನ ಯಾಕೆ ಈ ರೀತಿ .......???? ಯೋಚಿಸುತ್ತಾ ಹಾಗೇ ಕಾರಿನ ಸೀಟಿಗೆ ಒರಗಿ ಕಣ್ಮುಚ್ಚಿದ... ಬೆಳಗ್ಗೆ ಇಂದ ನಡೆಯುತ್ತಿರುವ ಘಟನೆಯ ಬಗ್ಗೆನೇ ಚಿಂತೆ ..... ಅವನ ಮೋಬೈಲ್ ಗೆ ಒಂದು ಕಾಲ್ ಬರುತ್ತೆ ಏನೋ ಮಾತಾಡಿ ಕಾಲ್ ಕಟ್ ಮಾಡ್ತಾನೆ ಆಗ ಕ್ಯಾಮರಾ ಮ್ಯಾನ್ ಜಗನ್ ನ ಕೇಳ್ತಾನೆ... ಯಾಕ್ ಸರ್ ಇವತ್ತು ಮೂಡ್ ಅಪ್ಸೆಟ್ ಆಗಿರೋ ತರ ಕಾಣುತ್ತೆ. ಏನ್ ಆಯ್ತು ಸರ್ ..?? ಏನ್ ಇಲ್ಲಾ ವಿಜಯ್ ತಲೆ ಸ್ವಲ್ಪ ನೋವು ಅಷ್ಟೇ ಅಂದ .. ಬನಶಂಕರಿಯ ಕೆಲಸ ಮುಗಿಸಿ ಜಗನ್ ಆಫೀಸ್ ಗೆ ಬರುತ್ತಾನೆ. ಆಫೀಸ್ ನಲ್ಲಿ ಏಲ್ಲಾ ರಿಪೋರ್ಟ್ ಕೊಟ್ಟು ಮನೆಗೆ ಹೊರಡುತ್ತಾನೆ. ಅಷ್ಟರಲ್ಲಿ ಚೈತ್ರಾಳ ಫೋನ್ ಬರುತ್ತೆ, ಜಗನ್ ನಾನು ಇವಾಗ ಹೋಟೆಲ್ ಕಲ್ಪನಾ ಹತ್ತಿರ ಇದೀನಿ ಬಂದುಬಿಡು ..... ಸರಿ ನಾ ಅಲ್ಲಿಗೆ ಬರ್ತಿನಿ ೩೦ ನಿಮಿಷ .. ಜಗನ್ ಆಫೀಸ್ ನಿಂದ ಕಲ್ಪನಾ ಹೋಟೆಲ್ ಕಡೆ ಹೊರಟ ... ಬೈಕ್ ಅಲ್ಲೆ ಸೈಡ್ ನಲ್ಲಿ ಪಾರ್ಕ್ ಮಾಡಿ ಹೋಟೆಲ್ ಒಳಗೆ ಹೋದ ಅಲ್ಲಿ ಚೈತ್ರಾಳನ್ನು ನೋಡಿ ಅವನಿಗೆ ಆಶ್ಚರ್ಯ ........... ಎನ್ ಅದು ...?? ಮುಂದುವರೆಯುವುದು ........

ಅವಳ ಕನಸು

ಭಾಗ ೧
೬ ಗಂಟೆ ಅಲಾರಂ ಶಬ್ದ.. ಜಗನ್ ಬೇಗನೆ ಎದ್ದು ದಿನ ತನ್ನ ರೂಂಮಿನಾ ಕಿಟಕಿಯ ಪಕ್ಕ ಬಂದು ನಿಂತು ಹೊರಗೆ ನೋಡುತ್ತಿದ್ದ. ಹಾಗೆ ಇಂದು ಸಹ ನಿದ್ದೆ ಕಣ್ಣಿನಲ್ಲಿ ನೋಡುತ್ತಾ ನಿಂತಿದ್ದ. ಚಳಿಗಾಲದ ಋತು ಹೊರಗೆ ಮಂಜು ಮುಸುಕಿದ ವಾತಾವರಣ ತಂಪಾದ ಗಾಳಿ ಬೀಸುತ್ತಿತ್ತು ಸೂರ್ಯ ಇನ್ನೂ ಉದಯಿಸಿರಲಿಲ್ಲ. ಜಗನ್ ಮನೆಯ ಮಂದೆ ಇರುವ ಶೀಲಾ ಆಂಟಿ ಮನೆಯ ಅಂಗಳದಲ್ಲಿ ಯಾರೋ ಕುಳಿತು ರಂಗೋಲಿ ಬಿಡಿಸುವ ಚಿತ್ರ ಮಬ್ಬಾಗಿ ಕಾಣುತ್ತಿತ್ತು. ಜಗನ್ ತನ್ನ ಕಣ್ಣನ್ನು ಉಜ್ಜಿಕೊಂಡು ಮತ್ತೆ ಮತ್ತೆ ನೋಡುತ್ತಿದ್ದನು. ಇಷ್ಟು ದಿನ ಕಾಣದ ಈ ಸುಂದರ ಚೆಲುವು ಈ ದಿನ ಹೇಗೆ ಕಾಣುತ್ತದೆ. ನನ್ನ ಭ್ರಮೆಯೋ ಏನೋ ಅಂದುಕೊಂಡು ಅವಳನೇ ನೋಡುತ್ತಾ ನಿಂತ. ಹಳದಿ ಬಣ್ಣದ ಸೀರೆಯುಟ್ಟು ರಂಗೋಲಿ ಬಿಡಿಸುತ್ತಿದ್ದ ಆ ಚೆಲುವೆ ನೋಡಲು ತುಂಬ ಲಕ್ಷಣವಾಗಿದ್ದಳು. ಹಣೆಯಲ್ಲಿ ಸಿಂಧೂರ, ಕಿವಿಯಲ್ಲಿ ಹೊಳೆಯುವ ಚಿನ್ನದ ಓಲೆ. ಮೂಗ್ನತ್ತು. ತಲೆಯಲ್ಲಿ ಘಮ್ ಎನ್ನುವ ಮಲ್ಲಿಗೆ ಹೂವು ಇವೆಲ್ಲವೂ ಜಗನ್ ಗೆ ತುಂಬ ಆಕರ್ಷಿಸುತ್ತಿತ್ತು. ಅವಳನ್ನೇ ನೋಡುತ್ತಾ ನಿಂತಿದ್ದ. ಎಂದೂ ಕಾಣದ ಆ ಚಲುವು ಇಂದು ಎಲ್ಲಿಂದ ಉದ್ಭವಿಸಿದೆ. ಅಗ ಅವನಲ್ಲಿ ಒಂದು ಆಲೋಚನೆ ಮೂಡಿತ್ತು. ಆ ಶೀಲಾ ಅಂಟಿ ಅವರ ಮನೆ ಮಂದೆ ಯಾವತ್ತು ರಂಗೋಲಿ ಬಿಡಿಸೋದು ನೋಡಿಯೇ ಇರಲಿಲ್ಲ ಆದ್ರೆ ಇವತ್ತು... ಎಂದು ಯೋಚಿಸುತಿರುವಾಗ ಯಾರೊ ಜಗನ್.. ಜಗನ್.. ಎಂದು ಕೂಗಿದ ಸದ್ದು ಯಾರು...?? ಮತ್ತೆ ಜೋರಾಗಿ ಕೂಗಿದ ಸದ್ದು .. ಯಾರು...?? ಯಾರೋ ತನ್ನನ್ನು ಅಲ್ಲಾಡಿಸಿದಂತೆ ಭಾಸವಾಯಗುತ್ತಿತ್ತು. ಓಮ್ಮೆಲ್ಲೆ ಮೇಲೆದ್ದು ಕುಳಿತು!!!!! ಕಣ್ಣು ಮಿಟುಗಿಸುತ್ತಿದ್ದ ಅವರಮ್ಮ..... ಲೋ ಸೋಮಾರಿ ಜಗ್ಗ ಎದ್ದೇಳೋ ಬೇಗ ಟೈಮ್ ಆಯ್ತು ಆಫೀಸ್ಗೆ.. ಇನ್ನೂ ಮಲ್ಗಿದಾನೇ ಎಂದು ಜಗನ್ನಾ ಎಬ್ಬಿಸಿದರು. ಅವಾಗ ಜಗನ್ ಎದ್ದು ಟೈಮ್ ನೋಡಿದ ೯ ಗಂಟೆ. ಹೋ ಟೈಮ್ ಆಯ್ತು ರಂಗನಾಥ ಬೈತಾರೆ ಅಂತ ಸ್ನಾನಕ್ಕೆ ಹೊರಟ.. ನಾನು ಇಷ್ಟೊತಂನ್ಕ ಕಂಡಿದ್ದು ಕನ್ಸು ಎಂದು ಆಫೀಸ್ಗೆ ರೆಡಿಯಾಗಿ ತಿಂಡಿ ತಿನ್ನದೆ ಬೈಕ್ ಹತ್ತಿ ಹೊರಟ.. ಆದ್ರೆ ಶೀಲಾ ಅಂಟಿ ಮನೆ ಹತ್ತಿರ ಬಂದಾಗ ಅವನಿಗೆ ಒಂದು ಅಶ್ಚರ್ಯ ಕಾದಿತ್ತು.... ಎನ್ ಅದು .....?? ಮುಂದುವರೆಯುವುದು....

ಭಾಗ -೨

ಆಫೀಸ್ ಗೆ ಹೊರಟ ಜಗನ್ ಶೀಲಾ ಅಂಟಿ ಮನೆಯ ಮುಂದೆ ಬಂದು ನಿಂತು ನೋಡಿದ ಅವರ ಮನೆಯ ಮುಂದೆ ರಂಗೋಲಿ ಇರಲೇ ಇಲ್ಲಾ ಅದರೆ ಅವನು ನೋಡಿದ ಹಳದಿ ಬಣ್ಣದ ಸೀರೆಯುಟ್ಟ ಹುಡುಗಿ ಶೀಲಾ ಅಂಟಿ ಮನೆಯ ಬಾಗಿಲಿನಲ್ಲಿ ನಿಂತು ಯಾರೋಂದಿಗೊ ಮಾತನಾಡುವ ದ್ರುಶ್ಯ ಜಗನ್ ಮುಚ್ಚಿದ ಹೆಲ್ಮೆಟ್ ನ ಒಳಗಿನಿಂದ ಕಣ್ಣಿಗೆ ಕಾಣುತ್ತಿತ್ತು. ಅವನಿಗೆ ಆಶ್ಚರ್ಯ ಆದರು ಗೊಂದಲ ಶುರುವಾಯ್ತು. ನಾನು ಕಂಡದ್ದು ಕನಸೋ ಇಲ್ಲಾ ನಿಜವೊ ಅಥವಾ ಯಾವುದೋ ಜನ್ಮದ ರಹಸ್ಯವೊ ಒಂದು ತಿಳಿಯದೆ, ತಲೆಯೋಳಗೆ ಹುಳ ಬಿಟ್ಟಂತಾಗಿ ಬೈಕ್ ಸ್ಟಾಟ್ ೯ ಮಾಡಿ ಆಫೀಸ್ ಕಡೆ ಹೊರಟ. ಜಗನ್ ಪಬ್ಲಿಕ್ ಟಿವಿಯಲ್ಲಿ ಕ್ರೈಂ ರಿಪೋಟ ೯ರ್ ಆಗಿ ಕೆಲಸ ಮಾಡುತ್ತಿದ್ದ. ನೋಡಲು ಸರಸುಂದರಾಂಗ. ೬ ಅಡಿಯ ಉದ್ದ ದೇಹ , ದುಂಡು ಮುಖ ಎಣ್ಣೆ ಗೆಂಪು ಮೈಬಣ್ಣ, ಜಗನ್ ತುಂಟು ಮತ್ತು ಮೃದು ಸ್ವಾಭವದವನು , ಹುಡಗಿಯರಿಗೆ ಚೊಕ್ಲೇಟ್ ಹೀರೊ, ಅವನಿಗೆ ಸಣ್ಣ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳೊಂದಿಗೆ ಮಗುವಾಗುವ ರೀತಿ ಅವನದು. ಆಫೀಸ್ ತಲುಪಿ ತನ್ನ ಕೆಲಸ ಶುರುಮಾಡಿದ. ಸುಮಾರು ೨, ೩ ಗಂಟೆಯ ಸಮಯ ಆಫೀಸಿನ ಎಲ್ಲಾ ರಿಪೋಟ೯ರ್ ಗಳು ಕಾಫಿ ಕುಡಿಯಲು ಹೊರಟರು. ಜಗನ್ ಕೂಡ ಹೊರಟ ( ಜಗನ್ ಕಾಫಿ ಚಹ ಏನು ಕುಡಿಯೊದಿಲ್ಲ) ಆಫೀಸಿನ ಕ್ಯಾಂಟಿನಲ್ಲಿ ಕುಳಿತು ಮಾತನಾಡುವಾಗ ಬಾಗಿಲ ಬಳಿ ಯಾರೊ ಹಳದಿ ಬಣ್ಣದ ಸೀರೆಯುಟ್ಟು ನಿಂತಿರುವುದು ಜಗನ್ ಗೆ ಕಾಣಿಸುತ್ತದೆ. ಅಲ್ಲೊoದು ಆಶ್ಚರ್ಯ!!!!! ಅವನಿಗೆ ಒಂದು ತರ ಶಾಕ್ ಆಗುತ್ತೆ ಬೆಳಿಗ್ಗೆ ಕನಸಲ್ಲಿ ಶೀಲಾ ಅಂಟಿ ಮನೆ ಹತ್ತಿರ ಮತ್ತೆ ಆಫೀಸ್ ಕ್ಯಾಂಟಿನ್ ನಲ್ಲಿ ಒಂದೆ ತರ ಕಾಣಿಸುವ ಈ ಪರಿ ಅವನಿಗೆ ಮತ್ತಷ್ಟು ಗೊಂದಲದ ಜೊತೆ ಭಯ ಶುರುವಾಯಿತು ಈ ದಿನ ಹೀಗೇಕೆ ಆಗುತ್ತಿದೆ ಒಂದು ತಿಳಿಯದೆ ತಲೆ ಮೇಲೆ ಕೈ ಇಟ್ಟು ಏನೋ ಯೋಚಿಸುತ್ತಿದ್ದ . ಆಗ ಅಲ್ಲಿಗೆ ಅವನ ಸ್ನೇಹಿತ ಬರುತ್ತಾನೆ. ಏನೋ ಜಗನ್ ತಲೆ ಮೇಲೆ ಕೈ ಇಟ್ಟು ಕೂಳಿತ್ತಿದ್ಯಾ ಎನ್ ಅಯ್ತೊ ನಿಂಗೆ ಎನ್ ಇಲ್ಲಾ ಕಣೋ ಸ್ವಲ್ಪ ತಲೆ ನೋವು ಅಷ್ಟೇ( ಬೆಳಗ್ಗೆ ಇಂದ ನಡೆದ ಘಟನೆ ಅವನಿಗೆ ಹೇಳಾಲೋ ಬೇಡವೋ ಎಂದು ಮನಸ್ಸಿನಲ್ಲಿ ಹೇಳಿಕೊಂಡು) ಆ ಸಮಯಕ್ಕೆ ಮ್ಯಾನೇಜರ್ ಇಂದ ಕಾಲ್ ಬರುತ್ತೆ. ಜಗನ್ ನನ್ನ ಕ್ಯಾಬಿನ್ ಗೆ ಬನ್ನಿ ಮ್ಯಾನೇಜರ್ ಕರೆಯುತ್ತಾನೆ. ಜಗನ್ ಅಲ್ಲಿಂದ ಮ್ಯಾನೇಜರ್ ಕ್ಯಾಬಿನ್ ಗೆ ಹೋಗ್ತಾನೆ ನೋಡಿ ಜಗನ್ ಇವಾಗ ಒಂದು ಕಾಲ್ ಬಂದಿತ್ತು ಬಸವನಗುಡಿ ಇಂದ. ಯಾರೊ ಹುಡುಗಿ ಆತ್ಮಹತ್ಯೆ ಮಾಡ್ಕೊಂಡಿದಾಳಂತೆ ಹೋಗಿ ಅದೇನು ರಿಪೋರ್ಟ್ ಮಾಡ್ಕೊಂಡು ಬನ್ನಿ. ಸರಿ ಅಂತ ಜಗನ್ ಹೇಳಿ ಕ್ಯಾಮರಾ ಮ್ಯಾನ್ ಜೊತೆ ಬಸವನಗುಡಿ ಕಡೆ ಹೊರಟ. ಹೋಗುವಾಗ ಅವನಿಗೆ ಒಂದೆ ಆಲೋಚನೆ ಹಳದಿ ಬಣ್ಣದ ಸೀರೆ ಹುಡುಗಿ. ೩೦ ನಿಮಿಷದಲ್ಲಿ ಬಸವನಗುಡಿ ತಲುಪಿದ ಅಲ್ಲಿ ಜಗನ್ ಗೆ ಮತ್ತೊಂದು ಆಶ್ಚರ್ಯ ಕಾದಿತ್ತು ಎನ್ ಅದು.....??? ಮುಂದುವರೆಯುವುದು .......

ಸೋಮವಾರ, ಡಿಸೆಂಬರ್ 8, 2014


ಅವಳು

ಅಂದು ಸಂಜೆ ೫.೩೦ರ ಸಮಯ.. ಆಫೀಸ್ ಕೆಲಸ ಮುಗಿಸಿ ಅವನು ಮನೆಗೆ ಹೋಗುತ್ತಿದ್ದ..ಮನಸ್ಸಿನಲ್ಲಿ ಅವಳ ನೆನಪು ತುಂಬಾ ಕಾಡುತ್ತಿತ್ತು.. ನಾಲ್ಕು ವರ್ಷಗಳ ಹಳೆ ನೆನಪುಗಳು ದಿನ ಅವನಲ್ಲಿ ಅವಳಾಗಿ ಮೂಡಿ ಒಂದು ಸುಂದರ ನೆನಪುಗಳ ಸರವನ್ನೇ ಅವನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದನು.. ಆ ಚಲುವೆ ಸಹ ಸಂಜೆ ೬ ಗಂಟೆಗೆ ಆಫೀಸ್ ಕೆಲಸ ಮುಗಿಸಿ ಮುಂಬೈನ ಕಲಾಭಾದೇವಿ ದೇವಸ್ಥಾನದಿಂದ ದಿನ ನಡೆದುಕೊಂಡು ಹೋಗ್ತಾಳೆ. ಮುಂಬಯಿಯ ಆ ಮಹಾನಗರದಲ್ಲಿ ಅವಳು ಇವನ ಕಣ್ಣಿಗೆ ಸುಂದರ ಮನಮೋಹಕ ಚಲುವೆ ತರ ಪ್ರತಿದಿನ ಕಾಣುತ್ತಾಳೆ.. ಆಫೀಸ್ ನಿಂದ ಸಿಟಿ ರೈಲ್ವೆ ಸ್ಟೇಷನ್ ಗೆ ೫ ಮೈಲು ಆಗುತ್ತೆ.. ಆ ಕಲಾಭಾದೇವಿ ದೇವಸ್ತಾನದ ಪಕ್ಕ ಒಂದು ಸರ್ಕಲ್ ಇದೆ. ಆ ಸರ್ಕಲ್ ನ ಹತ್ತಿರ ಪ್ರತಿದಿನ ಬಸ್ಸು ಹಿಡಿದು ಅವಳು ವಿಟಿ ರೈಲ್ವೆ ಸ್ಟೇಷನ್ ಗೆ ಹೋಗೋದು ಅವನಿಗೆ ಮೊದಲಿನಿಂದಲೂ ಗೊತ್ತಿರುತ್ತೆ.. ಇವನು ಸಹ ಆಫೀಸ್ ಕೆಲಸ ಮುಗಿಸಿ ಹಾಗೆ ಅವಳನ್ನು ಈ ದಿನ ನೋಡುವ ಬಯಕೆಯಲ್ಲಿ ಕಲಾಭಾದೇವಿ ಸರ್ಕಲ್ ಕಡೆ ಹೊರಟ.. ಅವನ ಮನಸ್ಸಿನಲ್ಲಿ ಅವಳ ಹಳೆ ನೆನಪುಗಳ ಹೊಸ ಸರಮಾಲೆ, ಆಗಸದಲಿ ಕಪ್ಪನೆ ಕಾರ್ಮೋಡಗಳ ಸಾಲು ಸಾಲು ಮೆರವಣಿಗೆ.. ಆ ಸಂಜೆಯ ತಿಳಿನೀಲಿ ಅಗಸವನ್ನೆಲ್ಲಾ ನುಂಗಿನುಂಗಿ ಬರುತ್ತಿದ್ದವು ಆ ಕಪ್ಪು ಕಾರ್ಮೋಡಗಳು.. ತಂಪಾದ ಗಾಳಿ ಕಾರ್ಮೋಡಗಳ ಭಯಕ್ಕೆ ತಾವು ಆ ಕಿರಿದಾದ ರಸ್ತೆಗಳಲ್ಲಿ, ಸಂದಿ-ಗೊಂದಿಗಳಲ್ಲಿ ನುಗ್ಗಿ ನುಗ್ಗಿ ಓಡುತಿತ್ತು. ಮಳೆ ಬರುವುದು ಗ್ಯಾರಂಟಿ.. ಅವಳನ್ನು ಈ ದಿನ ನೋಡ್ತಿನೋ ಇಲ್ವೋ.. ನೋಡಲೇಬೇಕು ಅನ್ನೋ ಬಯಕೆ ಅವನಲ್ಲಿ.. ಆ ಮಳೆ ಅಡ್ಡಿ ಅಗುವೊದೋ ಎಂದು ಅನುಮಾನ ಮೂಡುತ್ತಿರುವಾಗ ಮಳೆರಾಯನಿಗೆ ಒಂದು ರಿಕ್ವೆಸ್ಟ್ ಮಾಡಿಕೊಳ್ತಾನೆ. ತಲೆ ಮೇಲೆ ಮಾಡಿ ( ಓ ಮಳೆರಾಯ ಪ್ಲೀಸ್ ಈ ಒಂದು ದಿನ ಮಾತ್ರ ಸ್ವಲ್ಪ ಲೇಟ್ ಆಗಿ ಭೂಮಿಗೆ ಬಂದು ಬಿಡು.. ನನ್ನವಳ ಒಮ್ಮೆ ಕಣ್ತುಂಬ ನೋಡುವ ಬಯಕೆ ಮನದಲಿ ಮೂಡಿದೆ, ದಿನಂಪ್ರತಿ ನೀ ಸ್ವಲ ಸಹಕರಿಸು ಕೈ ಜೋಡಿಸಿ ಬೇಡುವೆನು ನಾ ನಿನಗಿಂದು.) ಅವನ ಈ ಬೇಡಿಕೆಗೆ ಮಳೆರಾಯ ಯಾವುದೇ ಪ್ರತಿಕ್ರಿಯೆ ನೀಡದಂತೆ ಕಾಣಲಿಲ್ಲ. ಇಂದು ಏನಾದರೂ ಸರಿಯೇ ಅವಳ ಮುಖ ನೋಡದೆ ನಾನು ಮನೆಗೆ ಹೋಗಲಾರೆ ಅನ್ನೋ ಹಠ ಅವನಲ್ಲಿ ಭದ್ರವಾದ ಮನೆ ಮಾಡಿತ್ತು. (ಆದರೆ ಅವನ ಮಾತಿಗೆ ಮಳೆರಾಯ 'ಹೋಗೊಲೋ ಹೋಗೋ ..ದಿನಾ ನಿಂದು ಇದೆ ಆಯಿತು' ಎನ್ನುತ ಮಳೆರಾಯ ಮೆಲ್ಲಗೆ ಹೆಜ್ಜೆ ಇಡುತ್ತಾ ಬರುತ್ತಿದ್ದಾನೆ.)

ಅವಳು ಬರೋ ಸಮಯ ಆಯಿತು ನಾನು ಹೋಗಲೇಬೇಕು... ಅವಳ ನೋಡಲೇಬೇಕು ಎನ್ನುವ ಹಠದೊಂದಿಗೆ ಹೆಜ್ಜೆ ಇಡುತ್ತ ಮುಂದೆ ಹೋಗ್ತಾನೆ..ಆಗ ದಾರಿಯಲಿ ಅವನ ಸ್ನೇಹಿತ ಏನೋ ಇವತ್ತು ಈ ಕಡೆ ಹೊರಟೆ ಮನೆಗೆ ಹೋಗೋಲ್ವ?? ಹೋಗ್ಬೇಕು ಇಲ್ಲೇ ಕಲಾಭಾದೇವಿ ದರ್ಶನ ಮಾಡಿ ಆಮೇಲೆ ಹೋಗ್ತಿನಿ ಅಂದ.. ಹೌದ ನಾನು ಬರ್ತೀನಿ ದೇವಸ್ತಾನಕ್ಕೆ ದೇವಿ ದರ್ಶನ ಮಾಡೋಣ ಅಂದ. (ಅಯ್ಯೋ ಇವನು ಎಲ್ಲಿಂದ ತಗ್ಲಾಕ್ಕೊಂಡ ಶಿವ) ಇಲ್ಲ ನನಗೆ ಬೇರೆ ಕೆಲಸ ಇದೆ ಆಮೇಲೆ ಹೋಗ್ತಿನಿ ನನಗೆ ಲೇಟ್ ಆಗುತ್ತೆ ನೀನು ಹೋಗು. ಎನ್ನುತ್ತಾ ಅವನು ಮುಂದೆ ಸಾಗಿಯೇಬಿಟ್ಟ..
ಕಲಾಭಾದೇವಿ ಸರ್ಕಲ್ ಹತ್ತಿರ ಬರುತ್ತಾ ಬರುತ್ತಾ ಅವನ ಮನಸ್ಸಿನಲ್ಲಿ ಏನೋ ಒಂದು ತರ ಪಿಲಿಪಿಲಿ ಅನ್ನಿಸೋಕೆ ಶುರುವಾಯ್ತು..
ನಾನು ಅವಳನ್ನ ಹೀಗೇಕೆ ನೋಡೋಕೆ ಹೋಗ್ತೀನಿ.. ಅವಳು ನನ್ನ ನೋಡಿದ್ರೆ ಏನಂದುಕೊಂಡಾಳು .. ಇವನೇಕೆ ದಿನ ಇಲ್ಲಿ ಬಂದು ನಿಂತಿರುತ್ತಾನೆ? ನನ್ನ ನೋಡೋಕೋ ಎಂಬ ಸಂಶಯ ಬಂದ್ರೆ. ಇಲ್ಲ ಇಲ್ಲ ದಿನ ಅವಳು ಹೋಗುವ ಸಮಯಕ್ಕೆ ನಾನು ಮನೆಗೆ ಹೋಗ್ತಿನಲ್ಲಾ ಏನು ಗೊತ್ತಾಗೊಲ್ಲ. ಸರಿ ಅವಳಿಗೆ ಕಾಣದ ಹಾಗೆ ಯಾವುದಾದರು ಬಿಲ್ಡಿಂಗ್ ನ ಸೈಡ್ ನಲಿ ಅವಿತು ನಿಂತರೆ ಅವಳಿಗೆ ಕಾಣುವುದಿಲ್ಲ ಎನ್ನುತ್ತಾ ಕಲಾಭಾದೇವಿ ಸರ್ಕಲ್ ಬಳಿ ಸರಿಯಾದ ಸಮಯಕೆ ಹಾಜರ್ ಆಗ್ತಾನೆ.
ಆದೆ ಸಮಯಕ್ಕೆ ಸರಿಯಾಗಿ ಮಳೆರಾಯ ಕಪ್ಪನೆ ಕಾರ್ಮೋಡ ಕರಗಿಸುತ್ತಾ ನೀರಾಗಿ ಒಂದೊಂದೇ ತುಂತುರು

, , , , , , , , , , , , , , , , ,, , , , , ,
, ,,,,,,,, , , ,, , , , ,,,,, , , ,, ,
, , , , , , , , , ,, , , , , , , , , , , , ,, , ,
, , , ,, , , , ,, , ,,, , ,, , , , , ,,, , ,,,, ,,,
, , , , , ,,, ,, , , ,,,, , ,, , ,,


ಭೂಮಿತಾಯಿಯ ಮಡಿಲನು ತಂಪಾಗಿಸಲು ಸುರ್ರ್ ........... .... ಎಂದು ಬರುವ ಸದ್ದು ಕೇಳಿ ಅವನು ಒಂದು ಬಿಲ್ಡಿಂಗ್ ಕೆಳಗೆ ನಿಂತು ಹಳೆಯ ನೆನಪುಗಳನ್ನ ಕೆದಕ್ಕುತ್ತಾ ಅವಳ ಬರುವ ದಾರಿಯನ್ನೇ ನೋಡುತಿರುತ್ತಾನೆ..ಮಳೆ ಇನ್ನು ಜೋರಾಗಿ ಸುರಿಯಲು ಶುರುಮಾಡಿದೆ. ಈ ಮಳೆಯಲಿ ಅವಳು ಬರುವಳೋ ಇಲ್ಲವೋ ಒಂದು ತಿಳಿಯದೆ ಅವನು ಅಲ್ಲೇ ಅವಳಿಗಾಗಿ ಕಾಯುತ್ತ ನಿಂತಿದಾನೆ. ಸಮಯ ೬.೩೦ ಆಗ್ತಾ ಬಂತು. ಮಳೆರಾಯ ತನ್ನ ಕಾರ್ಯ ಮುಗಿಸಿ ತನ್ನ ಒಡಲನ್ನು ಹಗುರವಾಗಿಸಿ ಹೋಗಿರುತ್ತಾನೆ. ಆದರೆ ಅವನ ಮನಸ್ಸು ಯಾಕೋ ಭಾರವಾಗಿರುವ ಅನುಭವ.. ಮನಸಲ್ಲಿ ಬರಿ ಅವಳದೇ ಚಿಂತೆಯಲಿ ಅವಳು ಮಳೆ ಕಡಿಮೆ ಅದ ಮೇಲೆ ಬಂದೆ 

ಬರುವಳು ಎಂಬ ಗಾಢವಾದ ನಂಬಿಕೆಯಿಂದ ಅಲ್ಲೇ ಕಾಯುತ ನಿಂತಿದ್ದಾನೆ. ಮಳೆ ಇನ್ನೂ ಕಡಿಮೆಯಾಯಿತು.. ಆಗ ಅವನ ಮನಸ್ಸಿನಲ್ಲಿ ಅವಳು ಈಗ ಬಂದೆ ಬರ್ತಾಳೆ, ಇಲ್ಲೇ ಬಂದು ಬಸ್ ಸ್ಟಾಪ್ ನಲಿ ಬಸ್ಸು ಹತ್ತುತ್ತಾಳೆ ಎಂಬ ನಂಬಿಕೆ ಬಂದು ಅಲ್ಲೇ ಕಾಯುತ್ತಾನೆ.
ಅದೇ ಸಮಯಕ್ಕೆ ತುಂತುರು ಮಳೆಯಲಿ ತಿಳಿಕೆಂಪು ಬಣ್ಣದ ಡ್ರೆಸ್, ತಲೆ ಮೇಲೆ ವ್ಯಾನಿಟಿ ಬ್ಯಾಗು, ರಸ್ತೆಯಲಿ ಹರಿಯುತ್ತುರುವ ನೀರನ್ನು ಜಿಗಿದು ಜಿಗಿದು ದಾಟಿ ಬರುವ ಅವಳ ನಡೆ ಕತ್ತಲೆಯಲ್ಲೂ ಹೊಳೆಯುವ ಕಪ್ಪು ಕಣ್ಣುಗಳು, ಲೇಟ್ ಆಯಿತು ಮನೆಗೆ ಹೋಗುವ ಆತುರ ಎಲ್ಲವನ್ನೂ ಹಾಗೇ ದಿಟ್ಟಿಸಿ ನೋಡುತ್ತ ನಿಂತನು.. ಅವಳು ಅವನ ಸಮೀಪ ಬಂದಷ್ಟು ಅವನ ಮನಸ್ಸಿನ ದುಗುಡ ಮತ್ತಷ್ಟು ಹೆಚ್ಚುತ್ತಾ ಹೋಯಿತು. ಮೂಕಮನಸ್ಸು ಮಗುವಾಯಿತೇ.... ಬದುಕು ಬರಡಾಯಿತೇ... ಅಸೆ ನೀರಲಿ ಕೊಚ್ಚಿ ಹೋಯಿತೇ... ನೋಟ ಮುಪ್ಪಾಯಿತೇ.... ಹೀಗೇಕೆ ನನ್ನ ಮನಸ್ಸು ತಳಮಳಿಸುತಿದೆ..... ಒಂದೂ ಗೊತ್ತಾಗದೆ ನಿಂತಲ್ಲೇ ಮೂಕಪ್ರೇಕ್ಷಕನಾಗಿ ಅವಳನ್ನೇ ನೋಡುತ್ತಿದನು. ಹೃದಯಬೇನೆಯಲ್ಲಿ ಅವಳನ್ನು ದಿಟ್ಟಿಸಿ ದಿಟ್ಟಿಸಿ ನೋಡುತ್ತಿದಂತೆ ಅವಳು ಬಸ್ಸನು ಹತ್ತಿ ಹೊರಟೆ ಹೋದಳು....
ಹೋಗೋದನ್ನೇ ನೋಡುತ ನಿಂತ ಅವನ ಕಣ್ಣು ಆ ಬಸ್ಸಿನ ನಂಬರ್ ಅನ್ನು ಹುಡುಕುತ್ತಿತ್ತು.. ಬಸ್ಸು ಹಾಗೆ ಕಲಾಭಾದೇವಿ ಸರ್ಕಲ್ ನಿಂದ ವಿಟಿ ಕಡೆ ಮರೆಯಾಗುತ್ತಿತ್ತು... ಅವಳನ್ನು ನೋಡಿದ ಅವನ ಮನಸ್ಸಿಗೆ ಸ್ವಲ್ಪ ಸಮಾದಾನವಾಯಿತಾದರೂ ಮನಸ್ಸಿನಲ್ಲಿ ಒಂದು ಗೊಂದಲ ಸೃಷ್ಟಿಯಾಯಿತು..
ಅವಳನ್ನು ನಾನು ಯಾಕೆ ಅಷ್ಟು ಇಷ್ಟಪಟ್ಟೆ...?? ಅವಳನ್ನೇ ಇಷ್ಟಪಡಲು ಕಾರಣವೇನು ..??? ಒಂದು ವರ್ಷದಿಂದ ಅವಳನು ನೋಡುವ ಆತುರ ಹಂಬಲ ನನಗೇಕೆ ..?? ಒಂದು ಸಲವೂ ಅವಳ ಬಳಿ ಮಾತಾಡಿಲ್ಲ. ಅವಳ ಕಣ್ಣಿಗೆ ನಾನು ಎಂದು ಕಾಣಿಸಿಕೊಂಡಿಲ್ಲ .. ಕದ್ದು ಕದ್ದು ನೋಡುವ ಚಟ ನನಗೆ ಎಲ್ಲಿದ ಬಂತು..???? ಒಂದೂ ತಿಳಿಯದೆ ಹಾಗೆ ಯೋಚಿಸುತ್ತ ವಿಟಿ ಕಡೆ ಹೋಗುವ ಬಸ್ ಹಿಡಿದು ಹೊರಟ. ಅವನ ಮನಸ್ಸಿನಲ್ಲಿ ನೂರಾರು ಪ್ರಶ್ನೆ ಹುಟ್ಟೋಕೆ ಶುರುವಾಯಿತು.. ನನಗೆ ಅವಳು ಸಿಗ್ತಾಳ ..?? ಅವಳ ಜೋತೆ ಮಾತಾಡ್ತಿನ ...??? ಅವಳು ನನ್ನ ನೋಡ್ತಾಳ..??. ಮುಂದೆ ಏನಾಗುತ್ತೋ..?? ಇನ್ನು ಏನೇನೋ ಪ್ರಶ್ನೆಗಳು ಅವನ ತಲೆಯಲಿ ಹುಳ ಬಿಡುವ ಹೊತ್ತಿಗೆ ಬಸ್ಸು ವಿಟಿ ಸ್ಟೇಷನ್ ಹತ್ತಿರ ಬಂದಿತ್ತು.. ದಿನ ಹತ್ತೋ ಟ್ರೈನ್ ನಲ್ಲಿ ಮನೆಸೇರಿ ಆಮೇಲೆ ಫ್ರೆಶ್ ಆಗಿ ಊಟ ಮಾಡಿ ಅವಳ ಯೋಚನೆಯಲ್ಲೇ ಮಲಗುತ್ತಾನೆ (ಅವನ ಕನಸಿನಲ್ಲಿ ದಿನ ಕಾಡುವ ಕನಸಿನ ಕನ್ಯೆ ಅವಳೇ ಇರಬಹುದ) ಮುಂದೆ ನೋಡೋಣ ,..........

ಶುಕ್ರವಾರ, ಮೇ 23, 2014

 ಜಿರಳೆ ಮರ್ಡರ್ (  ಕೇಸ್  ಹಾಕಬೇಡಿ ) 

ದಿನ ನೀವು  ಬಸ್ ನಾ  ಸೀಟ್ನಲ್ಲಿ  ಕುಳಿತು  ಹಾಡು ಕೇಳೋದು , ಜೋರಾಗಿ ಮಾತಾಡೋದು, ನಿದ್ದೆ ಮಾಡೋದು , ಬುಕ್ಸ್ ಓದೋದು , ನ್ಯೂಸ್ ಪೇಪರ್ ಓದೋದು  ನೋಡಿರ್ತಿರ .. ಆದ್ರೆ  ಸೀಟ್ ಮೇಲೆ ಕೂತು ಡಾನ್ಸ್ ಮಾಡೋದನ ನೀವು ನೋಡಿದಿರಾ ಇಲ್ಲ ಅನ್ಸುತ್ತೆ.... 
ಇದು ಯಾಕೆ ಹೇಳ್ತಿದೀನಿ ಅಂದ್ರೆ ಇಂದು ಬೆಳಿಗ್ಗೆ  ಆಫೀಸ್ ಗೆ ಬರುವಾಗ ಬಸ್ಸನಲ್ಲಿ ಡಾನ್ಸ್ ಮಾಡಿದೆ.
ufff ....  ಯಾಕೆ ಕೇಳ್ತಿರ ನನ್ನ ಅವಸ್ತೆ ಅವಾಗ....... 
ನಡೆದ ಘಟನೆ...
ಎಂದಿನಂತೆ ಬೆಳಗ್ಗೆ  ೯ ಗಂಟೆಗೆ ರೆಡಿಯಾಗಿ  ಆಫೀಸ್ ಗೆ ಹೊರಟು ಬಸ್ ಅತ್ತಿ ಒಂದು ಸೀಟ್ ಮಾಡ್ಕೊಂಡು ಕುತ್ಕೊಂಡೆ.
ಬ್ಯಾಗ್ ನಿಂದ  ಎಸ್ . ಎಲ್ . ಬೈರಪ್ಪನವರ ವಂಶರುಕ್ಷ ಬುಕ್ ಓದುತ್ತ ಇದ್ದೆ. ತುಂಬ ಇಂಟರೆಸ್ಟಿಂಗ್ ಕಥೆ. ಓದ್ತಾ ಇದ್ರೆ ಏನೋ ಒಂದು ತರಹದ ನಿಜ ಜೀವನದಲ್ಲಿ  ಕಣ್ಣೆದುರಿಗೆ ನಡೆದನಂತ ಘಟನೆಗಳು ಎಂಬಂತೆ ಆ ಕಾದಂಬರಿ (ಒಮ್ಮೆ ಓದಿ ತುಂಬ ಚನ್ನಾಗಿದೆ ) ಬಸ್ಸು ತುಂಬ ರಷು ಇತ್ತು. ನಾನು ಓದುತ್ತ ಓದುತ್ತ ಅದರಲಿ ಮುಳುಗಿ ಹೋಗಿದೆ.   ಅವಾಗ ಬೆನ್ನಿನ ಹಿಂದೆ ಒಂತರ ಮುಲು... ಮುಲು .. ಏನಲು ಶುರವಾಯಿತು. ನಾನು ಇದೇನಪ್ಪ ಅಂತ ಕೈ ಹಾಕಿ ಅದನ್ನು ತೆಗೆಯೋಕೆ ಪ್ರಯತ್ನ ಪಟ್ಟೆ  ಆಗಲಿಲ್ಲ ಸುಮ್ನೆ  ಬುಕ್ ಓದೋಕೆ ಸ್ಟಾರ್ಟ್ ಮಾಡಿದೆ ಅದ್ರು ಸ್ವಲ್ಪ  ಜಾಸ್ತಿಯೇ ಮುಲು  ಮುಳು ಅನ್ನೋಕೆ ಮತ್ತೆ ಪ್ರಾರಂಬಿಸಿತು. ನಂಗೆ ಏನು ಮಾಡಬೇಕು ಅಂತ ತೊಚ್ಚೆಲೇ ಇಲ್ಲ ...  ನನ್  ಕೈ ನ ಹಿಂದೆ ಮುಂದೆ ಮಾಡಿ ಮಾಡಿ ಇನ್ ಶರ್ಟ್  ಮಾಡಿದ ಶರ್ಟ್ ತೆಗೆದೇ  ಮತ್ತೆ  ಬಾಡಿ ನೆ ಶೇಕ್ ಮಾಡೋಕ್ಕೆ ಸ್ಟಾರ್ಟ್ ಆಯಿತು.ಕುತಲೇ  ಕೈ ಬ್ರೇಕ್ ಡಾನ್ಸ್ ಅಡೋತರ ಆಗ್ತಿತ್ತು. ಪಕ್ಕದಲಿ ಕುಳಿತವರು .  
 ಏನ್ ಆಯ್ತಾಪ್ಪ ...?? ಯಾಕ ಮುಲ್ಗುಡ್ತಿದ್ಯ ....???  ಸರಿಯಾಗಿ ಕೂತ್ಕೋ ಅಂದ್ರು
ಸರ್ ಆಗ್ತಿಲ್ಲ ಬೆನ್ನಲ್ಲಿ ಏನೋ ಮುಲು ಮುಲು ಅಂತ ಇದೆ ಅದೇಕೆ ಹೀಗೆ ಅಡ್ತಿದಿನಿ ಇಲ್ಲ ಅಂದ್ರೆ ನಾನ್ಯಾಕೆ  ಮುಲು ಮುಲು ಅನ್ಲಿ ಸರ್ .....
ಹೌದೆ...!!!   ಅದೇನು ಅಂತ  ಸರಿಯಾಗಿ ನೋಡ್ಕೋ  ಅಂದ್ರು
ಬಸ್ಸ ನಲ್ಲಿ ನಿಂತಿದವರಲ್ಲ  ನೋಡಿ ನಗೋಕೆ ಶುರು.... ( ಬೆಕ್ಕಿ ಗೆ ಚಲ್ಲಟ್ಟ ... ಇಲಿಗೆ ಪ್ರಾಣ ಸಂಕಟ ) 
ನಂಗೆ ಒಂದು ತರ  ಆಗ್ತಿತ್ತು ...   ಅದ್ರು ಕೈ ಹಾಕಿ   ತೆಗೆದೇ .....  ನೋಡೇದರೆ ಸಣ್ಣ  ಜಿರಳೆ.... ನನ್ನ ಅಂಗಿಯಲಿ ಸೇರ್ಕೊಂದಿತ್ತು. ನನ್ನ ಕೈ ಹಾಕಿದ ರಬಸಕೆ ಪಾಪ ಅದು  ನನ್ನ ಕೈಯಲ್ಲಿ  ಮರ್ಡರ್ ಆಯಿತು. 
ನಂಗೆ ಆ ಕ್ಷಣ ಏನೇನೊ ಅನ್ಸೋಕ್ಕೆ ಶುರು ಆಯಿತು,   ಆದ್ರೆ ಏನು ಮಾಡೋ ಆಗೇ  ಇಲ್ಲ  ಕೆಲ ಸಮಯ ದೇವ್ರು ಏನೆಲ್ಲಾ ಅಡುಸ್ತನೆ  ಅಂತ ಗೊತ್ತೇ ಆಗೋಲ.......  ನಂಗೆ ಜಿರಳೆ  ಬೆಟ್ಟು ಅವ್ನು ತಮಾಷೆ ನೋಡ್ತಾನೆ...
 ಹ್ಹ ಹ್ಹ ಹ್ಹ ಹ್ಹ .....

ಆಫೀಸ್ ಗೆ ಹೋಗು ಅವಸರದಲಿ ಬಟ್ಟೆ ನ  ಕೊಡವಿ ಅಕೊಳೋದು ಮರಿಬೇಡಿ...ಇಲ್ಲ ಅಂದ್ರೆ ನನ್ ತರ   ಬಸ್ ನಲಿ ಡಾನ್ಸ್ ಮಾಡಬೇಕಾಗುತ್ತೆ.... .

ಮಂಗಳವಾರ, ಮೇ 20, 2014

ಸ್ನೇಹ ಸಹಾಯ ಸಂಘದ ೭ ನೆ ಇವೆಂಟ್
ಭಾನುವಾರ 12th   ಜನವರಿ  2012  ನಮ್ಮ ಸ್ನೇಹ ಸಹಾಯ ಸಂಘದ  ೭ ನೇ    ಇವೆಂಟ್ ಮಾಡೋಕ್ಕೆ
ನಮ್ಮ ಮಂಡ್ಯ  ಜಿಲ್ಲೆಯ ಮಳವಳ್ಳಿ ತಾಲೋಕಿನ ಕೊಣ್ಣನಕೊಪ್ಪಲು ಗ್ರಾಮದ ಒಂದು ಪುಟ್ಟ ಸರ್ಕಾರಿ ಶಾಲೆಗೆ ಹೊರಡಲು  ಮುಂಜಾನೆಯ ತಣ್ಣನೆಯ  ಚಳಿಯಲ್ಲೂ ಮೈ ಗೆ ಬೆಚ್ಚನೆಯ ಹೊದಿಕೆ  ಹೋದುಕೊಂಡು ನಾನು ಮತ್ತೆ ಸತೀಶ ನಾಯಕ್  ಮಜೆಸ್ಟಿಕ್  ಬಂದು ಸೇರಿ ಕೊಂಡೆವು.
ಮಜೆಸ್ಟಿಕ್  ಪಕ್ಕದಲ್ಲಿ  ಇರುವ ಒಂದು ಸಣ್ಣ ಗಣೇಶನ ದೇವಸ್ತಾನದ ಪಕ್ಕದಲ್ಲಿ  ನಿಂತ  ಹಳೆ  ಮುಖಗಳು  ಹೊಸ ಲೂಕಿಂಗ್ನಲ್ಲಿ  ಮಂಜಿನ ಹನಿಯಂತೆ ಪಳ ಪಳ ಹೊಳೆಯುತ್ತಿದರು.  ಹುಡುಗೀರ್ ಎಲ್ಲ ಹಾಯ್ ಹೌ ಹರ್ ಯು ..ಡಾರ್ಲಿಂಗ್ಸ
 ನಿನ್ನ ನೋಡಿ ತುಂಬ ದಿನ ಆಗಿತ್ತು .  ನೀನು ತುಂಬ ಕ್ಯೂಟ್ ಹಾಗಿ ಕಾಣುತ್ತಿದ್ಯಾ  ಮುಖಕ್ಕೆ ಏನು ಮೆಥ್ಕೊತಿಯೇ  ನಂಗು ಸ್ವಲ್ಪ ಹೇಳೇ ಮಾ  ಅಂತ ಡೋವ್ ಬಿಟ್ಟಿದೆ ಬಿಟ್ಟಿದ್ದು...

ಅದೇ ನಮ್ಮ ಹುಡುಗರು ಬಂದು ಹಾಯ್ ಅಂತ  hug   ಮಾಡಿದೆ ಮಾಡಿದ್ದೂ... ಏನೋ ಎಷ್ಟು ದಪ್ಪ  ಆಗಿದ್ಯಾ    ಎನೋ ತಿನ್ತಿಯೋ  ಹೊಟ್ಟೆಗೆ ನಂಗು ಸ್ವಲ್ಪ whatsapp ನಲ್ಲಿ ಮೆಸೇಜ್  ಹಾಕೋ... ಅಂತ ಹುಡುಗರು ಕೈ ಮೈ ಕುಲ್ಕಿದ್ದೆ ಆಯಿತು ... 
ನಮ್ಮ ರಮ್ಮು ಗೆ ಒಂದು ಕಡೆ ನಿಂತ್ಕೊಂಡು ಎಲ್ಲ ಬಂದ್ರ ಇನ್ನು ಯಾರ್  ಯಾರ್ ಬರಬೇಕು ನೋಡ್ರೋ 
 ಲಿಸ್ಟ್ ಎಲ್ಲಿ ...??
 ಹೇಯ್ ಗುಂಡ ಲಿಸ್ಟ್ ನೋಡಿ ಜನ ಲೆಕ್ಕ ಹಾಕೋ  ಯಾರ ಬಂದಿಲ್ಲ ಕಾಲ್ ಮಾಡು ಟೈಮ್ ಸೆನ್ಸೆ ಇಲ್ಲ ಬೋಡತವು.  ಅಂತ ರಮ್ಮಿ  ಆಕಡೆ ಇಂದ ಈ ಕಡೆ  ರನ್ನಿಂಗ್ ಮಾಡಿದೆ ಮಾಡಿದ್ದು. 
ಆದ್ರೆ ನಾನು  ಅವನ ಮಾತು ಕೇಳದೆ ಈ ಕಡೆ ಹುಡುಗಿರಿಗೇ  ರೆಗುಸ್ತ , ಅವ್ರು ಏನಾದರು ತಿನ್ನೋಕೆ ತಂದಿದರ ಅಂತ ಹುಡುಗರೆಲ್ಲ ಅವರ ಬ್ಯಾಗ್ ಚೀಕಿಂಗ್ ನಲಿ ನಿರತರಗಿದ್ರು... ಅದೇ ಸಮಯಕ್ಕೆ  ಈ ಕಡೆ ಇಂದ  ಬಸ್   ಬಂತ ಇಲ್ವಾ ನೋಡ್ರೋ ಇಲ್ಲ ಅಂದ್ರೆ ಪಿ ಪಿ ಗೆ ಕಾಲ್ ಮಾಡಿ ಹೊಲ್ರೊ ಬಸ್ ಇನ್ನು ಬಂದಿಲ ಅಂತ  ಕೂಗಾಟ  ಅದೇ ಸಮಯಕ್ಕೆ  ಪಿ ಪಿ  ಕಿರಣ್ ಒಂಟೆ ಜಿರಾಫೆ ತರ ಎಂಟ್ರಿ ಕೊಟ್ಟಿದೆ. ಎಲ್ಲ ಹೋಗಿ ಅಪ್ಪಿಕೋ ತಬ್ಬಿಕೋ ಚಳುವನಿನ ಅನ್ಕೊಬೇಕು ಅತರ  ಹಿತ್ತು  ಅಲ್ಲಿ ಸಚುವೆಶನ್ ...
ಹಾಗೆ ಎಲ್ಲ ಮೀಟ್ ಮಾಡ್ತಾ  ಟೈಮ್ ಆಯಿತು ಕಂಡರೂ ಅಂತ ಎಲ್ಲ ಕುಗುತ ಇದ್ರೂ.  ಆ ಕಡೆ ಬಸ್ ಇದೆ   ಹೋಗೋಣ ಅಂತ ಒಂದು ಹಿಂಡು ಹೊರಟಿತು.

ಎಲ್ಲ  ಒಮ್ಮೆ ಬುಸ್ಸನು ನೋಡಿ  ಇದೇನಾ ...????  ಒಂದು ದೊಡ್ಡ ಬಸ್ಸ  ಅಲ್ಲದಿದ್ರೂ  32 ಜನ ಕುಳಿತ್ತು ಕೊಳ್ಳುವ  ವಿಥ್ಔಟ್  ಏರ್ ಕಂಡೀಶನ್ ಬಸ್ಸು ಅಲ್ಲೇ ಪಕ್ಕದಲಿ  ನಿಂತು  ( ಪೋಲಿಸ್ ಮಾಮ  ಬಂದ್ರೆ.... ಬಂದ್ರೆ ,.... ಅಂತ  ಕೂರಲು  ಅಗ್ದಲೆ ನಿಂತ್ಕೊಂಡು  ನಮ್ಮುನೆ ಕೈ ಬೇಸಿ ಬರೋ ಹಡ್ನಡಿಗಳ ಟೈಮ್ ಆಯಿತು. ನಮ್ಮ ಮಾವ ಬರ್ತೇನೆ ಹೋಗಿ ಊರು ಸೇರೋಣ ನಿಮಗೆಲ್ಲ ಟೈಮ್ ಸೆನ್ಸೆ ನೋಡಿ...)   ಅಂದು ಕೊಳೋ  ಟೈಮ್ ಗೆ ಎಲ್ಲ ಬಸ್ಸು ಹೇರಿದೆವು....ಬಸ್ಸ ನಲ್ಲಿ  ಔಟ್ ಸೈಡ್ ಕೂಲ್ ಇನ್ ಕಾಮಿಂಗ್ ಅಂತ ವಿಂಡೋ ದಲಿ ಇಮ್ಯಾಜಿನ್ ನಲಿ ಬರೆದಿದ್ನ ಯಾರು ಗಮನಿಸದೆ ಗ್ಲಸ್ಸ್ ಕ್ಲೋಸ್ ಮಾಡ್ರೋ ಅನುತ್ತ ಎಲ್ಲ ಬಂದ್ರ   ಕೌಂಟ್ ಸ್ಟಾರ್ಟ್ ಆಯಿತು.. .
( ಎಲ್ಲ ಬಂದಿದಾರೆ ನೀನು ರೈಟ್ ಹೇಳಣ್ಣ ಬಸ್ಸು ಬುಸುಗುಟ್ಟಿತು....)
ಬಸ್ಸಿ ನಲಿ ಮೊಜುಮಸ್ತಿ ಶುರುಅಯಿತು. ಅವ್ರಿಗೆ ಇವರು  ಬತ್ತಿ ಇಡೋದು .... ಇವರಿಗೆ ಅವ್ರು ಬತ್ತಿ ಇಡುತ್ತ ಹೊರಟ್ಟಿತ್ತು " ನಮ್ಮ ಸ್ನೇಹ ಸಹಾಯ ಸಂಘದ " ಭವ್ಯ ತೇರು ..   ಅದೇ ನಿಮಿಷದಲ್ಲಿ  ಬಸ್ಸಿನಲ್ಲಿ   ಘಮ ಘಮ ಅಂತ ಇತ್ತು ಸಹನಾ ಮಾಡಿಕೊಂಡು ಬಂದ  ಪುಳಿವಗ್ರೆ ಅನ್ನ.  ನಂಗೆ ಕೊಡ್ರೋ. ನೀನು ತಗೊಳ್ಳು... ಬಾಯಿ ಆ ಮಾಡೂ  ಚನ್ನಗಿದೆಯ....??? ಅಂತ ಕೇಳುತ್ತ  ತಿನ್ನಿಸುತ್ತಾ  ...  ಹಾಗೆ ಹೋಗುವಾಗ ಮತ್ತಷ್ಟು ಸ್ನೇಹಿತರು ಬಸ್ಸು ಹತ್ತಿದರು.. ಕೆಂಗಿರಿಯ ಮೋರಿಯ ಪಕ್ಕ ಅಂತು ಅಲ್ಲ ತುಂಬ ದೂರದಲಿ ಬಸ್ಸು ನಿಲ್ಲಿಸಿ ಹೊಟ್ಟೆ ಗೆ ಬಿಸಿ ಬಿಸಿ ಯಾಗಿ ತುಂಬಿಕೊಳ್ಳಲು ಹೋಟೆಲ್ ಕಡೆ ನಮ್ಮ ಸೈನ್ಯ ಹೊರಟಿತ್ತು. ಹೋಟೆಲ್ ಮ್ಯಾನೇಜರ್ ಅಬ್ಬ ಇವತ್ತು ಒಳ್ಳೆ  ಬಿಸಿನೆಸ್ ಅಂತ ಮನಸ್ಸಲಿ ಸಂತೋಷ ಮಾಡಿಕೊಂಡು  ಸ್ವಾಗತ ಸುಸ್ವಾಗತ.. ಬನ್ನಿ ಆ ಕಡೆ ಲಾಸ್ಟ್ ನಲಿ ಫುಲ್ ಖಾಲಿ ಇದೆ.. ಒಟ್ಟಿಗೆ  ಕುಳಿತು ಕೊಳ್ಳಿ.  ವೈಟರ್ ಬಾ ಇಲ್ಲಿ ಆರ್ಡರ್ ತಗೋ...
ವೈಟರ್ ಆಯಿತು ಸರ್..... ನಿಮ್ಮ ಆರ್ಡರ್ ಹೇಳಿ ಸರ್... ಎಲ್ಲರು ತಮ್ಮ ತಮ್ಮ ಆರ್ಡರ್ ಮಾಡಿದ್ರು... ಏನು ಗೊತ್ತ  ಇಡ್ಲಿ , ವಡೆ , ಮಸಾಲೆ ದೋಸೆ, ಸೆಟ್ ದೋಸೆ, ಪೂರಿ ಸಾಗು, ಚೌ ಚೌ ಬಾತ್ ಹೀಗೆ ಎಲ್ಲ ತಿಂದು ಹೊಟ್ಟೆ  ನ ಪ್ಯಾಕ್ ಮಾಡಿದೆ ಮಾಡಿದ್ದೂ .... ನಾನು ಮತ್ತೆ ಕಿರಣ್ ಎಲ್ಲರ ತಟ್ಟೆಯಲಿ ಕೂಕ್ಟೇಲ್ ತರ ಜಮಹಿಸಿದ್ದೆ ಜಮಹಿಸಿದ್ದು... ಆ ಸಮಯಕ್ಕೆ ಒಂದು ಸರ್ಪ್ರೈಸ ....
ಏನು ಗೊತ್ತ ನಮ್ಮ ಹುಡುಗೀರ್ ಗೆ ಅಣ್ಣ .... ಹುಡುಗರಿಗೆ ಪಂಡಿತರು  ಅವರೇ ನಮ್ಮ ಮುಂಬೈ ಡಾನ್  ಅನ್ನ ಬಾಂಡ್  ಅಶೋಕನನ ಎಂಟ್ರಿ ನೋಡಿ ... ತಿನ್ನೋದು  ಬಿಟ್ಟು  ಎಲ್ಲ ಮತ್ತೆ ಶುರು  ಅಪ್ಪಿಕೋ ತಬ್ಬಿಕೋ ಚಳುವಳಿ.
ಅಣ್ಣ ಬಾಂಡ್  ಅದೆಲ್ಲ ಮುಗಿಸಿ ಬಂದು ತಂಗಿದಿರ ಬಳಿ ತಿಂಡಿ ತಿಂದಿದೆ  ತಿನ್ದಿದು.
ತಿಂಡಿ ತೀರ್ಥ  ಎಲ್ಲ ಮುಗಿಸಿ ಮತ್ತೆ ಪ್ರಯಾಣ ಸಿದ್ದ.  ರಮ್ಮು ಮತ್ತೆ ಎಲ್ಲ ಬಂದ್ರ ನೋಡ್ರೋ ...?? ಬಂದ್ರು ನೀನು ಹೊರಡು ಅಂತ ಎಲ್ಲರ ಕೂಗು... ಅದೇ ಸಮಯಕ್ಕೆ ಹೇಯ್ ಇನ್ನು ಒಬ್ರು ಬಂದಿಲ್ಲ. ಇನ್ನು ಮೂರು ಜನ ಬರಬೇಕು ಅಂತ ಕೂಗಿದರು. ಅಯ್ಯೋ ಅವ್ರು ಬರಲಿ ತಡಿರೋ. ಡ್ರೈವರ್  ನಿಲ್ಸಪ್ಪ ವಸ್ಸಿ ಬಸ್ನ ನಮ್ಮ ಹುಡುರರು ಎಲ್ಲೋ ಸೈಡ್ ನಲಿ ಹೋಗೆ  ಬಿಡ್ತಿದ್ರು ಅಂತ ಕಾಣುತ್ತೆ  ಅದರಿಂದ ಬಿಟ್ಟು ಬಂದಿದಿವಿ ಅವರನ್ನು ಕೊರೆದುಕೊಂಡು ಹೋಗೋಣ ಇಲ್ಲ ಅಂದ್ರೆ ನಮಗೆ ಹಾಕೊಂಡು ರುಬ್ತಾರೆ. ಅಂತ ಬಸ್ಸನ್ನು ನಿಲ್ಲಿಸಿ ಅವರನು ಮತ್ತೆ ಹತ್ತಿಸಿಕೊಂಡು ಹೊರಟೆವು....
.

ನಮ್ಮ ಹಿಂಡಿನ ಮುಖ್ಯ ಸದಸ್ಯ ಎಲ್ಲ ಮಾಮ ಅಂತ ಕರಿಯೋ ಬಿಡದಿ ಸ್ವಾಮಿನ ಏತಕೊಂಡು .. ರೈಟ್ ...ರೈಟ್..

.ಮೈಸೂರ್ ರೋಡ್ ನಲಿ ನಮ್ಮ  ಭವ್ಯ ತೇರು  ಬರುತ್ತಿದೆ ಅಂತ ಸೂರ್ಯ ಇವತ್ತು ಜಾಸ್ತಿನೆ ರೋಶನಿ ಕೊಟ್ಟಿದಾನೆ. ಅದಕ್ಕೇನು ಕಮ್ಮಿ ನಾನು ಅಂತ ಗಾಳಿ ತಪ್ಪಾಗಿ ಬಿಸುತಿದೆ... ಆದರೆ ಸೂರ್ಯನ ಮುಂದೆ ಗಾಳಿ ತನು ಏನು ಇಲ್ಲ ಅಂತ ಸುಮ್ಮನೆ ಹಾಗೆ ಮರದಲ್ಲಿ   ಮರೆಯಾಯಿತು.  ಸೂರ್ಯನ ತಾಪ ಹೆಚ್ಚದಂತೆ ಬಸ್ಸಿ ನ ಕಿಟ್ಟಕಿಗಳು ಹಾಗೆ ಸ್ವಲ್ಪ ಪಕ್ಕಗೆ ಸರಿದವು... ಹೊರಗಿನ ಬಿಸಿಯಾ  ಜೊತೆ ದೋಳಿನೊಂದಿಗೆ ಗಾಳಿ ಬಸ್ಸಿನ ಕಿಟಕಿಯ ಹೊಳಗೆ ರಪ್ಪ ಅಂತ ನುಗ್ಗಿಬಿಟ್ಟಿತು. ಎಲ್ಲರು ಕಿಟಕಿ ಹಾಕ್ರೋ ದೂಳು ಬರ್ತಿದೆ.
ಪಾಪ ಬಸ್ಸು ಕೂಡ ಮಳವಳ್ಳಿ  ರಸ್ತೆಯ  ಮೈ ಮಟಕ್ಕೆ  ಡಾನ್ಸ್ ಮಾಡುತ್ತ ನಮ್ಮನು ಮೇಲಕ್ಕೆ ಕೆಳ್ಳಕ್ಕೆ ಆ ಕಡೆ ಈ ಕಡೆ ತಳ್ಳುತ ... ಏಗೃತ.... ಸಂತೋಷದಿಂದ ನೋಡಿದ್ರ ನಾನು ಕೂಡ ನಿಮಗಿಂತ ಚನ್ನಾಗಿ ಡಾನ್ಸ್ ಮಾಡಬಲ್ಲೆ..
ಹಾಗೆ ಬಸ್ಸಿನ ಡಾನ್ಸ್ ಜೊತೆ ನಾವು ಡಾನ್ಸ್ ಮಾಡುತ್ತ ಸ್ವಲ್ಪ ಲೇಟ್ ಹಾಗಿ  ಕೋಣನಕೊಪಲ್ಲು ಗ್ರಾಮ ತುಲುಪ್ಪಿ ಬಿಟ್ಟೆವು.  ಗ್ರಾಮದ ಮಂದಿ ನಮಗಾಗಿ ಕಾಯುತ್ತ ನೀರು ನಿಂತಿದ್ರು ....
 

ಆ ಊರಿನ ಸಣ್ಣ ಸಣ್ಣ ಹುಡುಗರು , ಹುಡುಗಿಯರು ನಮ್ಮ ಬಸ್ಸು ಬರೋದೆ ನೋಡುತ್ತಾ ... ಬಸ್ಸು ಬಂತು ಅಂತ ಸ್ಕೂಲ್ ನ ಹೊಳಗೆ ಹೋಗಿ ಕೂಗಿ ಹೇಳುತಿದ್ದರು.
ಆ ಸಮಯಕ್ಕೆ  ಊರಿನ ಹಿರಿಯರು ,  ಮೇಷ್ಟು  ಎಲ್ಲ ನಮ್ಮನು ಹೊಳಗೆ ಕರೆದರು. ನಾವೆಲ್ಲ ಬಸ್ಸು ಇಳಿದು. ಸ್ಕೂಲ್ ನ ಮುಂಬಗದಲಿ ನಮಗಾಗಿಯೇ  ಕಾಯುತ್ತ ಬಿಸಿಲಿನಲ್ಲಿ ಹೊಣಗಿದ ಶಾಮಿಯಾನ ನಮ್ಮುನ ಹಾಗೆ ಕೋಪದಿಂದ ನೋಡುತ್ತಾ ಬನ್ನಿ ಹೊಳಗೆ ಬನ್ನಿ ನಿಮಗೆ ಕಾಯುತ್ತ ಇದೀನಿ... ಈ ಸಿಟಿ ನವರಿಗೆ ಟೈಮ್ ಸೆನ್ಸೆ ಅನೋದೆ ಇಲ್ಲ ನೋಡಿ ಅಂತ ಬೈಯೋಕೆ ಸ್ಟಾರ್ಟ್.... ಕುರ್ಚಿಗಳು ಬನ್ನಿ ಬನ್ನಿ ನಮ್ಮ ಮೇಲೆ ಕುಳಿತುಕೊಳ್ಳಿ ನಿಮಗಗೆ ನನ್ನ ದೂರದಿಂದ ತರ್ಸಿದರೆ. ನೀವು  ಆರಾಮ ಹಾಗಿ ಕುಳಿತುಕೊಳ್ಳಿ.  ಅದು ಹೇಳುವುದಕ್ಕೂ ನಾವು ಕುಲಿತುಕೊಳ್ಳುವುದಕ್ಕು ಒಂದೇ ಸಮಯ...... 


ಹಾಗ ಶುರುವಾಯಿತ್ತು, ನಾವು ಬಂದಿದ ಕಾರ್ಯಕ್ರಮಕ್ಕೆ. ಸ್ವಾಗತ ಭಾಷಣ , ಅಧ್ಯಕ್ಷರ ಭಾಷಣ , ಎಲ್ಲರ ಭಾಷಣದ ನಂತರ ನಾವು ಸ್ಕೂಲ್ ಗೆ ದಾನವಾಗಿ  ಕೊಟ್ಟಿದ  ಎಜುಸಾಟ್ ನ  ಉದ್ಘಾಟನೆ ನಮ್ಮ ಮುಂಬೈ ನ ಅಣ್ಣ ಬಾಂಡ್ ಅಶೋಕಣ್ಣ  ಅವರಿಂದ  ಎಲ್ಲಾರ ಜೋರಾದ ಚಪ್ಪಾಳೆ ಯಾ ಸದ್ದು ಮುಗಿಲು ಮುಟ್ಟುವ ಹಾಗೆ ತಟ್ಟಿದರು   ಮಕ್ಕಳಿಗೆ ಸಿಹಿ ಹಂಚಿ  ಅವರೊಂದಿಗೆ ಅಲ್ಲೇ ನಮಗೆ  ಬೇಕದ ಆಂಗಲ್ ನಿಂದ  ಫೋಟೋ ತೆಗುಸ್ಕೊಂಡು.  ನಂತರ ಊಟಕ್ಕೆಸಿದ್ದರಗಿದೆವು. 
ನಮ್ಮ ಹೊಟ್ಟೆ ಹಾಗಲೆ ಟೈಮ್ ಆಯಿತು ಊಟ ಹಕುಸ್ರೊ ಅಂತ  ಬಡ್ಕೊತ ಇತ್ತು. ಸರಿ ಎಲ್ಲ ಊಟಕೆ ಬನ್ನಿ ಅಂತ ಎಲ್ಲರನ್ನು ಸ್ಕೂಲ್ ನ ರೂಂ ನಲ್ಲಿ  ಕೂರಿಸಿ ಊಟ ಬಡಿಸಿದರು..  ಊಟಕೆ ಏನು ಗೊತ್ತ .... ಮುದ್ದೆ ಊಟ ಅವರೇಕಾಳು  ಗೊಜ್ಜು , ಅನ್ನ,  ಸಾರು , ಪಯಸ , ಅಪ್ಪಳ , ಉಪ್ಪಿನಕಾಯಿ, ಹೀಗೆ  ಮ್ರುಷ್ಟನ್ನ್ನ  ಭೋಜನ ನಮ್ಮಗಾಗಿ ತಯಾರಿ ಮಾಡಿದ್ದರು.  ಎಷ್ಟು  ರುಚಿ ಇತ್ತು  ಆದ್ರೆ ಎಲ್ಲ ಎರಡು ಎರಡು ಸರಿ ಮುದ್ದೆ  ತರಿಸಿಕೊಂಡು ತಿಂದಿದ್ದೆ ತಿಂದಿದ್ದು ... ಬಾಯಿ ಚಪ್ಪರಿಸುವಷ್ಟು.  ತಿನ್ನುವಾಗ ಕೂಡ ಫೋಟೋ  ತೆಗ್ದಿದೆ ತೆಗ್ಡಿದು.... 

ಊಟವಾದ  ನಂತರ ಎಲ್ಲ ತಮ್ಮ ತಮ್ಮ ಹೊಟ್ಟೆ ಮುತ್ತಿಕೊಂಡು ಹ ಹ ಸೂಪರ್ ಊಟ ಆಂಟಿ ಒಳ್ಳೆ  ಬಿಗೃಟ  ಮಾಡಿದಹಾಗೆ ಆಯಿತು.  ( ಅನುಟಿ ನಾಚಿಕೊಂಡು thank  you  ಅಂದ್ರು ) ನಿಮಗೆ ತುಂಬ ಧನ್ಯವಾದಗಳು.
ಆಗಲೇ ಮಧ್ಯಾನ  ೨. ೩೦ ಸಮಯ ಮನೆಗೆ ಊರಿನ ಎಲ್ಲಾ ಸದಸ್ಯರಿಗೂ  ನಮಿಸುತ್ತಾ ನಾವು ಹೊರಡುತ್ತೆ ಅಂತ ಹೇಳಿ ಎಲ್ಲ ಸ್ನೇಹಿತರು  ನಮಸ್ಕರಿಸಿ ಹೊರಟವು. ಕೆಲ ಸ್ನೇಹಿತರು ತಮ್ಮ ತಮ್ಮ  ಐರವಾತ ಗಾಡಿಯಲ್ಲಿ ಮನೆಗೆ ತೆರಲ್ಲಿದರು. ನಾವು ಬಂದ್ದಿದ್ದ ಬಸ್ಸು   ಬುಸುಗುಡುತ ಬನ್ರೋ ಟೈಮ್ ಆಗುತ್ತೆ  ಬೆಂಗಳೂರು ಹೋಗ್ಬೇಕು  ನಂಗೆ ಮದ್ಯರಾತ್ರಿ  ಇನೋದು ಟ್ರಿಪ್ ಇದೆ ಅಂತ ಅದರ ಮನಸ್ಸಿನಲ್ಲಿ ಅಂದುಕೊಳ್ಳುತಿತ್ತು.  ನಾವು ಬಸ್ಸನ್ನೇರಿ ಮಕ್ಕಳಿಗೆ ಟಾಟಾ ಟಾಟಾ ಬೈ ಮಡಿ ಹೊರಟೆವು. 
 ಇನ್ನು ಟೈಮ್ ಇದೆ ಅಲ್ವ ಇಲ್ಲೇ ಅತ್ತಿರದಲಿ ಭರಚುಕ್ಕಿ ವಾಟರ್ ಫಾಲ್ಸ್ ಇದೆ ನೋಡ್ಕೊಂಡು ಹೋಗೋಣ ಏನು ಹೇಳ್ತಿರ ಎಲ್ಲ .... ಎಲ್ಲರು ಹಾಗೆ ಅಗಾಲಿ ನೋಡ್ಕೊಂಡು ಹೊಗೊಣ ... ( ನಮ್ಮ ಹುಡುಗರು ಮೊದ್ಲೇ ಈ ಪ್ಲಾನ್ ಮಾಡಿದ್ರು)   uff  ಬಸ್ಸ  ಮತ್ತೆ ಬುಸುಗುಟ್ಟುತ .......  ಡ್ರೈವರ್ ಗೆ ಹೇಳಿ ನಾವು ಆ ದಾರಿಲ್ಲಿ ಹೊರಟೆವು 
           ಭಾರಚಿಕ್ಕಿ ಫಾಲ್ಸ್ ಬಂದ  ತಕ್ಷಣ ಎಲ್ಲ ಸ್ನೇಹಿತರು ಮತ್ತೆ ಸ್ನೇಹಿತೆಯರು  ಬಸ್ಸ ಇಳಿದು ಒಂದೇ ಓಟ 
ಹುಡುಗರು ಮೊದೆಲೇ ಪ್ಲಾನ್ ನಂತೆ ಬಟ್ಟೆ  ತಂದಿದ್ರು . ಎಲ್ಲ ಹುಡುಗರು ನೀರಿನಲಿ ದುಮಿಕಿದ್ದೆ ದುಮಿಕ್ಕಿದು  ಹುಡುಗಿಯರು ಸಹ  ಹುಡುಗರಿಗಿಂತ  ಕಮ್ಮಿ ಏನು ಇಲ್ಲ ಅವ್ರು ಕೂಡ ನೀರಲಿ ಆಟ ಆಡಿದೆ ಆಡಿದ್ದು .... ಸಮಯ ಕಳೆದದ್ದೇ  ಗೊತಗಲಿಲ್ಲ. ಆಗಲೇ ೬. ಗಂಟೆ ಆಗಿತ್ತು  ಸರಿ ಎಲ್ಲ  ಹೊರಡಲು ಸಿದ್ದರಾಗಿ ಎಂದು ಒಂದು ಕೂಗು ಕಡೆ ಇಂದ ಕೇಳಿಸಿತು ಸರಿ ನಾವೆಲ್ಲ ಬೆಂಗಳೂರು ಹೊರಡಲು ಸಿದ್ದರಾದೆವು

ಬಸ್ಸು ನಾವು ಬರುವುದನೆ ಎದುರು ನೋಡುತ್ತಿತು ಬನ್ನಿ ಬನ್ನಿ  ನಿಂಗೆ  ಇದೆ ಇವಾಗ ....... 
ನಾವು ನೀರಿನಲಿ ಆಟವಾಡಿ ತುಂಬ ಸುಸ್ತಾಗಿತ್ತು ಬಂದು ತಮ್ಮ ತಮ್ಮ ಸಿಟ್ಟಿನಲಿ ಕುಳಿತು ಸ್ವಲ ನೆದ್ರೆಗೆ ಹೋದರು . ಬಸ್ಸು  ತಮ್ಮ ಪಾಡಿಗೆ ಹಾಡು ಹೇಳುತ್ತಾ   ಬೆಂಗಳೂರಿನತ ಪ್ರಯಾಣ ಬೆಳೆಸಿತು..... 

ಮಲ್ಲೇಶ ಸಕಲೇಶಪುರ 

ಸೋಮವಾರ, ಮೇ 13, 2013


"ಶತಮಾನಂಭವತಿ" .

ನಿನ್ನೆ ಕಳೆದ ಒಂದು ಅದ್ಬುತ ಕ್ಷಣ ಅಂದರೆ  ನಮ್ಮ  ೩ಕ(೩ಕೆ )ರ  ನೂರು ಕವಿಗಳ ನೂರು ಕವನ ಸಂಕಲನ ಬಿಡುಗಡೆ ಸಮಾರಂಭ ...... "ಶತಮಾನಂಭವತಿ" .
ಸಂಜೆ ೪.೩೦ ಕ್ಕೆ ಮನೆ ಇಂದ ಹೊರಟು ಕಾಲ್ನಡಿಗೆಯಲ್ಲಿ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ತಲುಪುವಷ್ಟರಲಿ ಸಂಜೆ ೫.೦೦ ಗಂಟೆ ಆಗಿತು. ಅವಾಗ ನನ್ನ ಕಣ್ಣಿಗೆ ಕಂಡವರು ಶ್ರೀಕಾಂತ್ ಮಂಜುನಾಥ್ ಸಾರ್


ಅವರ ಕ್ಯಾಮರ ಕಣ್ಣಲಿ ಕಣ್ಣಿಗೆ ಕಟ್ಟುವಂತ ಅತ್ಯದ್ಬುತ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ದೃಶ್ಯ ಎದುರಿಗೆ ಬಂದು ನಿಂತಿತು. ಅವರನ್ನು ಮಾತನಾಡಿಸಿದ ನಂತರ ಕಂಡವರು


ಪ್ರದೀಪ್ ರಾವ್ ಅವರಿಗೆ ಒಂದು ಹಾಯ್ ಹೇಳಿದೆ.

ಮತ್ತೆ ಎದುರಿಗೆ ಬಂದವರೇ ಕ್ಯಾಮರದ ಕಣ್ಣಿನ ಕಲೆಗಾರರು ಬಾಲು ಸಾರ್ ಅವರ ಒಂದು ಸ್ಮೈಲ್ ಮನನೋಹಕವಾಗಿತ್ತು

ನಂತರ ಕಂಡವರು ಶಿವೂ ಸಾರ್ ಅವರ ಕ್ಯಾಮರ... ಮಳೆರಾಯ ಬಂದು ಕಾಡಿದರೆ.... ಎಂಬ ಭಯದಲ್ಲಿ ಕ್ಯಾಮರದ ಮೇಲೆ ಛತ್ರಿ ಹಾಕಿಕೊಂಡು ತೆಗೆಯುತ್ತಿದ ಚಿತ್ರಗಳು ಹಾಗೆ ಕ್ಯಾಮರದಲ್ಲಿ ಅಚ್ಚಾಗುತ್ತಿದ್ದವು....
ಹಾಗೆ ರೂಂ ನಿಂದ ಹೊರಬಂದ ಬೂಪ ... ಸತೀಶ್ ನಾಯಕ್ ಅವರನು ನೋಡಿ ಒಂದು ಕ್ಷಣ ಏನಿದು..???? ಸತೀಶನನ್ನು ನೋಡಿ ಮದುಮಗನು ಅಂದು ಕೊಂಡೆ ..........ಅಗಾ ಅವರೇ ಮದುಮಗನಂತೆ ಬಂದು ನನ್ನನು ಹಾಗೆ ಅಪ್ಪಿಕೊಂಡರು ....ಆ ಅಪ್ಪುಗೆಗೆ ಮನಸ್ಸಿನಲ್ಲಿ ಸಂತೋಷದ ಹರುಷ ಉಕ್ಕಿತು .
ಮತ್ತೆ ಕಂಡವರು ಅರುಣ್ ಶೃಂಗೇರಿ (ಉಪ್ಪಿ) .......

....ಅವರಂತೂ ಸತೀಶ ನಾಯಕ್ ಗಿಂತ ಒಂದು ಕೈ ಮೇಲೆ ಅನೋ ಹಾಗೆ ವಿಜ್ರುಮುಸುತ್ತಿದ್ದರು .ಅವಗಿಗೊಂದು ಪುಟ್ಟ ಅಪ್ಪುಗೆ...ನಂತರ ಕಣ್ಣಿಗೆ ಬಿದ್ದವರು ನವೀನ ಕೆ.ಅರಹಳ್ಳಿ ಮತ್ತು ಗೋಪಿನಾಥ್ yil ಅವರಿಗೊಂದು ಹಾಯ್ ಹೇಳಿ ಹಾಗೆ ಮುಂದೆ ಹೋದಾಗ ಕಂಡದ್ದು ...

ಸುಂದರ ಸೊಬಗಿನ ಅಪರೂಪದ ರೂಪಕ ನಮ್ಮ ಅಕ್ಕರೆಯ ಅಕ್ಕ ರೂಪಕ್ಕ....ಅವರ ಪ್ರೀತಿಯ ಸ್ವಾಗತ ಮನಸ್ಸಿನಲ್ಲಿ ಮರೆಯಲಾದ ಒಂದು ಅಚ್ಚಳಿ....ಅವರೊಂದಿಗೆ ಮಾತಾಡಿ ಹಾಗೆ ನನ್ನ ಕ್ಯಾಮರ ಕಣ್ಣು ರೂಮಿನತ್ತ.......ಕ್ಲಿಕ್ ಮಾಡಿದ್ದೂ ನನ್ನ ಪ್ರೀತಿಯ ಅಣ್ಣ.... ಅಣ್ಣ ಬಾಂಡ್ ಅಶೋಕಣ್ಣ ಅವರಿಗೊಂದು ಪ್ರೀತಿಯ ಅಪ್ಪುಗೆ ತಂಪಾದ ಗಾಳಿಯಂತೆ ಅಪ್ಪಳಿಸಿತು.... 

ಅವರೊಂದಿಗೆ ಹೊರ ಬಂದಾಗ ಕಂಡದು ನನ್ನ ನೆಚ್ಚಿನ ಗೆಳೆಯ ಸತೀಶ್ ಬಿ ಕನ್ನಡಿಗ ಮತ್ತೆ ಅವನೊಂದಿಗೆ ಬಂದ ಅರುಣ್ ಕುಮಾರ್ ಅವರ ಮೊದಲ ಪರಿಚಯ ತುಂಬ ಅಚ್ಚರಿಯಾಗಿತ್ಗಿತು. ಅಲ್ಲೇ ಪಕ್ಕದಲಿ ನಿಂತಿದ್ದ ಗೆಳತಿ ಮಂಜುಳಾ ರವೀಶ್ ಅವರಿಗೂ ಹಾಯ್   ಹೇಳುತಿರುವಾಗ...


 ಬಿರುಗಾಳಿಯಂತೆ ವೇಗವಾಗಿ ಬಂದು ನಿಂತವನೆ ಪ್ರವೀಣ್ ಭಟ್ ಸಂಪ. ಅವನಿಗೊಂದು ದೊಡ್ಡ ಅಪ್ಪುಗೆ.
 ಹಾಗೆ  ನನ್ನ ಕಣ್ಣು ಅಕ್ಕ ಪಕ್ಕ ಅಡಿಸಿದಾಗ ಅಲಲ್ಲಿ ಗುಂಪು ಗುಂಪುಪಾಗಿ ಮಾತಾಡುತಿದ ಹೊಸ ಮುಖಗಳ ಹಳೆ ಪ್ರತಿಬೆಗಳು ಹಳೆ ಪ್ರತಿಬೆಗಳ ಹೊಸ ಮುಖಗಳು ಅವರನು ನೋಡಿ ಮನಸ್ಸಿನಲ್ಲಿ ಉಲ್ಲಾಸ ಹಾಗೆ ಹರಡಿತು...



ಸಮಯ ಕಳೆದಂತೆ ಸ್ನೇಹಿರತ ಆಗಮನ ಹಾಗೆ ಮೆಲ್ಲನೆ ಬಂದವನು  ನನ್ನ ಆತ್ಮಿಯ ಗೆಳೆಯ ಜಗ್ಗು ಜಾನೆ ಮನ್ನನ್ನು .( ನೋಡಿ ತುಂಬ ಕುತೂಹಲವಹಿತು ಏಕೆಂದರೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ ಕೆಲಸದ ಮೇಲೆ ಮುಂಬೈ ಗೆ ಹೋಗ್ಬೇಕು ಅಂತ ಇದ್ದವ ಸರಿಯಾದ ಸಮಯಕ್ಕೆ ಬಂದನಲ್ಲ ಅಂತ) ನೋಡಿ  ತುಂಬಾ ಸಂತೋಷವಾಯಿತು. 

ಮತ್ತೆ ತಿರುಗಿ ನೋಡಿದರೆ ಸರಿಯಾದ ಸಮಯಕ್ಕೆ ಹಾಜರ್ ಆಗುವ  ನಮ್ಮ ಮುದ್ದಿನ (ಮಾವ ) ಮಹೇಶಣ್ಣ ಮತ್ತೆ ಅತ್ತಿಗೆ ಬಂದದ್ದು  ಕುಶಿಯಲಿ ನಿಂತಾಗ ಕಣ್ಣಿಗೆ ರಂಜಿಸಿದು ನಮ್ಮ ನಾಯಿ ಕಳ್ಳಿ ಸಹನಾ ಅವಳಿಗೋದು ಹಾಯ್ ಹೇಳಿ  ಹಾಗೆ ಎಲ್ಲರೊಂದಿಗೆ ಮಾತುಕತೆ ಆಡುತ್ತ ನಿಂತಿದಾಗ ಪಕ್ಕದಲ್ಲಿ ಎಲ್ಲರನ್ನು  ಕರೆಯುತ್ತಿದಾ   ಚಹಾ , ಕಾಫಿ , ಕೇಸರಿ ಬಾತ್  ಮತ್ತೆ ಉಪ್ಪಿಟ್ಟು ನಮ್ಮನು ಅಯಸ್ಕಾಂತದ ಹಾಗೆ ಸೆಳೆಯುತ್ತಿತು. ಎಲ್ಲರು ಸ್ವಲ್ಪ ಸ್ವಲ್ಪ ಅಂತಾನೆ  ೨ ರೌಂಡ್ ಬರಿಸುತಿದ್ರು ....ಇದನು ಕಂಡ ಕ್ಯಾಮರ ಮ್ಯಾನ್ ಗಳು ತಮ್ಮ ತಮ್ಮ ಕ್ಯಾಮರ ಕಣ್ಣಲಿ  ಕ್ಲಿಕ್ ಕ್ಲಿಕ್ ಮಾಡುತಿದ್ರು

 ..ಹಾಗ ನ್ಯೂಸ್ ಚಾನಲ್ ನವರು ಬಂದು ರಿಪೋರ್ಟ್ ಮಾಡುತಿದ್ರು .

ಅ ಸಮಯಕ್ಕೆ ಬಂದವರೇ ನಮ್ಮ ಮುಖ್ಯ ಅತಿಧಿ... ಕನ್ನಡ ಸಿನಿಮ ಸಾಹಿತ್ಯಲೋಕದ  ನಾದಬ್ರಹ್ಮ ಹಂಸಲೇಖ ಸರ್ ..ಅವರನು ನೋಡಿದು ಮೊದಲಾದರೂ ಅವರ ಪರಿಚಯ ಹಳೆಯದು. ಅವರು ನಮ್ಮೆಲರಿಗೂ ಹಾಯ್ ಹೇಳಿ ಹೊಳಗೆ ಹೋದರು ನಾವು ಸಹ ಸಭಾಂಗಣದ ಹೋಳಒಕ್ಕಿದೆವು ...ಹಗಲೇ ಸಭಾಂಗಣದ  ಹೌಸ್ ಫುಲ್ ಆಗಿತ್ತು ನಾವು ಹಿಂದೆ ಹೋಗಿ ಕುಳಿತೆವು. ನಮ್ಮ ಎದುರು ಕುಳಿತಿದ್ದ ಮಹಾನ್ ಲೇಖಕರದ ಗೋಪಿನಾಥ್ ಬೋರಾಗಿ ಸರ್, ಮಣಿಕಾಂತ್ ಸರ್ , ಬದ್ರಿನಾಥ್ ಪಲ್ಲವಿ ಸರ್ ,ಅವರಲಿಲಿ ಅವರದೇ ಮಾತುಗಳು ಕೇಳಿ ಬರುತಿದವು.
ಅಲ್ಲಲಿ ಸಣ್ಣಗೆ  ಗುಸು... ಗುಸು ...ಪಿಸು ...ಪಿಸು ಮಾತು ಕೇಳಿಬರುತ್ತಿತು.....ಎಲ್ಲರ ಮುಖದಲಿ ಕಳೆ ಎದ್ದು ಕನಿಸುತ್ತಿತು. 


ಹೊಸ ಮುಖ ಹಳೆ ಪರಿಚಯ ಎಲ್ಲೋ ನೋಡಿವುವ ಅನುಭವ ... ಎಲ್ಲ ಫೇಸ್ಬುಕ್ ಮತ್ತೆ ಬ್ಲಾಗ್ ನಲ್ಲಿ  ಪರಿಚಯ ಇದ್ದವರು. ಕಣ್ಣ ಮುಂದೆ ಕಂಡಾಗ ಮುಖದ ಭಾವನೆ ಬೇರೆಯೇ.....ಆಶ್ಚರ್ಯ ಅವಲೋಕನ ....ಓ.. ನೀವೇ ಅಲ್ವ...????  ಸಕತ್ ಆಗಿ  ಬರಿತ್ತಿರ ಅಂತ  ತಮ್ಮ ತಮ್ಮ ಪರಿಚಯ ತಾವೇ ಮಾಡಿ ಕೊಡುತ್ತಿದರು. ಅವರನು ನೋಡಿ ಬಾವುಕನಾಗಿ ನೋಡುವಾಗ  ಬಾಗಿಲ ಬಳಿ ಕಂಡವರೇ ಅನು ಅಕ್ಕ ಅವರಿಗೋದು ಹಾಯ್ ...ಅವರಿಂದೆ ಕಂಡವರು ಅನುಮಪ , ಕುಮಾರ್ ಸರ್ , ಈಶ್ವರ್ ಸರ್, ಅವರೊಂದಿಗೆ  ಹೊಸ ಪರಿಚಯದ ಹಳೆ ಮುಖಗಳು. ಹಾಗೆಯೇ  ಕುಳಿತು ಅತ್ತ ಇತ್ತ ನೋಡುತ ಪಕ್ಕದಲ್ಲಿ ಬಂದು ಕುಳಿತವರೇ  
 ನಮ್ಮ ಅಕ್ಕ ಸುನಿತಕ್ಕ ಹೊ ಬಂದ್ರ  ಅಂತ ಅವರಿಗೂ ಹಾಯ್ ಹೇಳಿ ಮಾತಾಡುತ ಇದಾಗ  ಎದುರಿಗೆ ಬಂದವಳೇ ಮಾತಿನ ಮಲ್ಲಿ ನಗು ಮುಖದ ಸುಂದರಿ ರಶ್ಮಿ ಹೆಗ್ಡೆ ಬಂದವಳೇ ನನ್ನ ಹೊಟ್ಟೆಗೆ ಕೊಟ್ಟಳು ಒಂದು ಡಿಶುಂ ಹಾಯ್ ಮಲ್ಲ ಅಂತ ಹಾಯ್ ಹೇಳಿ ಅವಳ ಜಾಗದಲ್ಲಿ ಕುಳಿತು ಬಿಟ್ಟಳು.ಹಾಗ .
. ಪಟ್ ಅಂತ ಅರುಣ್ (ಉಪ್ಪಿ) ಬಂದು ಕಾರ್ಯಕ್ರಮ ಪ್ರಾರಂಭ ಮಾಡಿಯೇ ಬಿಟ್ಟರು.... ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸ್ವಾಗತ ಬಾಷಣ ,  

ಮುಖ್ಯ ಅತಿಥಿಗಳ ( ಹಂಸಲೇಖ ಸರ್ , ವಸುದೆವೆಂದ್ರ ಸರ್, ಮಂಜುನಾಥ್ ಕೊಳ್ಳೆಗಾಲ ಸರ್,) ವೇದಿಕೆಗೆ ರೂಪಕ್ಕ ಅವರಿದ ಅಹ್ವಾನ, ಮಹೇಶ್ ಸರ್   ಅಶೋಕಣ್ಣ ಸತೀಶ್ ನಾಯಕ್ ಅವರಿಂದ ಅತಿಥಿಗಳ ಪರಿಚಯ, ಅತಿಥಿಗಳು ದೀಪ ಬೆಳಗಿದರು. ಅತಿಥಿಗಳಿಂದ ನಮ್ಮ ೩ಕೆ ಯಾ ನೂರು ಕವಿಗಳ ನೂರು ಕವನ ಸಂಕಲನ 


" ಶತಮಾನಂಭವತಿ" ಲೋಕ್ಕರ್ಪಣೆ ಮಾಡಿದರು.
 ನಂತರ ಅತಿಥಿಗಳ ಭಾಷಣ ತುಂಬ ಸೋಗಸಗಿತು. ಅದರಲು ವಸುದೆವೆಂದ್ರೆ ಸರ್ ಅವರ ಮಾತು ಎಲ್ಲರ ಮನ ಮುಟ್ಟಿತು
ಚಪ್ಪಾಳೆಗಳ ಸುರಿಮಳೆ ...


 










  













ಮತ್ತೆ ಹಂಸಲೇಖ ಮತ್ತು ಮಂಜುನಾಥ್ ಕೊಳ್ಳೆಗಾಲ ಸರ್ ಅವರ ಭಾಷಣ ತುಂಬಾ ಚನ್ನಾಗಿತು. ಹಂಸಲೇಖ ಅವರ ಮತ್ತೊಂದು ನಾಮದೆಯ " ಹಮ್ಲೇ ಸೂಪರ್ಆಗಿದೆ ಅಲ್ವ...

 

.ಅವರ ನಾಮದೆಯ ಹೇಳಿ ಎಲ್ಲರ ಮುಖದಲಿ ನಗು
 ಹಾಗೆ ನನ್ನ  ಆತ್ಮಿಯ ಗೆಳಯ ಮತ್ತು ಗೆಳತಿಯರ ಅನುಪಸ್ತಿತಿ ಕಡುತ್ತಿತು.  ಸಮಯ ೮.೧೫  ಕಾರ್ಯಕ್ರಮ ಮುಗುಯುವ ಸಮಯ ಹೊರಗೆ ೩ಕೆ ಮಳಿಗೆಯಲಿ ಪುಸ್ತಕ ಕೊಳ್ಳುವವರ ಬರಟೆ ತುಂಬಾನೆ 


ಇತು ನಾನು ಒಂದು ಪುಸ್ತಕ ತೆಗೆದು ಕೊಂಡು ಅದರಲ್ಲಿ ಕವಿಗಳ ಅಸ್ತಕ್ಷರ ಮಾಡಿಸಿ ಕೊಂಡು ಹೊರಡಲು ಸಿದ್ದರಾದೆವು.  ಎಲ್ಲರಿಗು ತಮ್ಮ ತಮ್ಮ ಕಾರು , ಬೈಕು , ವಾಕ್, ಅಂತ ಶುಭರಾತ್ರಿ ಹೇಳಿ ಹೊರಟರು. ನಾವು ಸಹ ಎಲ್ಲರಿಗು ಶುಭರಾತ್ರಿ ಹೇಳಿ ಹೊರಟು ಮನೆಗೆ ಬಂದೆವು. 

ನಮ್ಮ ಶಿವೂ ಸರ್ ಕಾರ್ಯಕ್ರಮದಲಿ  ತೆಗೆದಿರುವ ಅದ್ಬುತ ಚಿತ್ರಗಳನ್ನು ನನ್ನ ಈ ಬರವಣಿಗೆಯಲ್ಲಿ ಬಳಸಿದೇನೆ.
 ನನ್ನ ಧನ್ಯವಾದಗಳನು ಅವರಿಗೆ ಅರ್ಪಿಸುತ್ತೆದೇನೆ.


ನಿಮ್ಮ ಪ್ರೀತಿಯ ಗೆಳೆಯ
ಮಲ್ಲೇಶ್ ಸಕಲೇಶಪುರ

ಸೋಮವಾರ, ಫೆಬ್ರವರಿ 25, 2013

ನಾಳೆ ಬರುವುದ ಚಿಂತಿಸು .....
ಇಂದು ನಡೆವುದ ...ವಿಚಾರಿಸು ....
ನಿನ್ನೆ ಕಳೆದಿರುವುದ..ನೆನೆಪಿಸು....
........................................
ಬದುಕು ಬಾವನೆಗಳ ಪ್ರತಿಬಿಂಬ...
ನೋಡು ನಿನ್ನನು .....ನಿನಾಗಿಯೇ ನಿಂತಿರುವೆ .....
ಎಷ್ಟು ನೋಡಿದರು ಕಾಣುವುದು ನಿನ್ನ ಹಾಗೆ ....
ಬದಲಾವಣೆ ನಿನಗೆ ಹೊರತು ಅದಕಿಲ್ಲ ....
ಒಮ್ಮೆ ಯೋಚಿಸು .......

ಶುಕ್ರವಾರ, ಡಿಸೆಂಬರ್ 7, 2012

ಮುಂಜಾನೆಯ ಮಂಜಿನ ಹನಿಯೊಂದು ಕಣ್ಣ  ರೆಪ್ಪೆ  ಮೇಲೆ ಮಲಗಿಹುದು ....
ಕನಚ್ಚಲಿ  ಕಾಣುತಿಹುದು ನನ್ನವಳ ಪ್ರತಿಬಿಂಬ .....
ಕಣ್ಣು ಬಿಟ್ಟರೆ ಮಾಯವಗುಹುದು ಅವಳಂದ ....
ತಿಳಿಯಲಾಗದೆ ಪೇಚಿಗೆ  ಸಿಕ್ಕೆದೆ ಮನಸ್ಸು ...
ನೀ ಒಮ್ಮೆ ನೋಡಬಾರದೇ  ಗೆಳತಿ...
ನಾಳೆ  ಎಂಬುದು ಕಾಡುವ ಪ್ರಶ್ನೆ  ...??
ಇಂದು ಎಂಬುದು  ಬರೆಯುತಿರುವ ಉತ್ತರ .....
ನೆನ್ನೆ ಎಂಬುದು  ಬರೆದಿಟ್ಟ ಉತ್ತರ .....
ಸಾಗತ್ತಿದೆ ಜೀವನ  ತಡೆ ಇಲ್ಲದೆ ....
ಚಲುವಾದ  ಮುಖದೊಳು  ಕೆಂದುಟಿಯ ಅಂದಕ್ಕೆ  ಸೊಗಸಾದ  ಮುತ್ತಿಡ್ಲ್ .. ..
ನನ್ನಾಸೆಯ ಮೊಗದಲಿ ಕೆಂದಾವರೆ ಅರಳಿರಲು ಬೆಚ್ಚನೆಯ ಒದಿಕೆ ನಾನಗ್ಲ ....
ಅಂಬಾರದಿ ನೀನಿರಲು ಸುಡುವ ಬೆಸಿಲಿಗೆ ಕೂಡೆ ನಾನಿದಿಲಾ ....
ಹೇಳು ಬೇಡು ಗೆಳತಿ  ಒಮ್ಮೆ ಕಾಡುವ ಮನಸ್ಸಿಗೆ !  

ಶನಿವಾರ, ಜನವರಿ 29, 2011



ಹುಡುಕುತಿದ್ದೇನೆ ನನ್ನವಳ !
ಚಂದಿರನ ಬೆಳದಿಂಗಳ ರಾತ್ರಿಯಲಿ !
ನಾನು ಕಾಣುವ ಸುಂದರ ಕನಸಿನಲಿ !
ತೊದಲುತಿರುವ ನನ್ನ ಮಾತುಗಳಲ್ಲಿ !
ಕಳೆದು ಹೋಗುತಿರುವ ಸಮಯದಲಿ !
ನೊಂದು ನೊಂದು ಬರೆದ ಕವನಗಳಲಿ !
ಕಣ್ಣಿಂದ ಹರಿಹುತಿರುವ ಜಲ ಜಲ ನೀರಿನಲಿ !
ನಾನು ನಿಂತು ಕಾಯುತಿರುವ ಕವಲೊಡೆದ ದಾರಿಯಲಿ !
ಎಲಿ ಹೋದಳೋ ತಿಳಿಯದಯಿತೆ ನನಗೆ ........................



ಮಂಗಳವಾರ, ಜನವರಿ 18, 2011

ನಿನ್ನ ನೆನಪು !



ನೆನಪು !
ಬೀಸುವ ತಂಗಾಳಿಯಲಿ !
ಗಮಗಮಿಸುವ ಪರಿಮಳದಲಿ !
ಜಳಜಳ ಹರಿವುವ ನೀರಿನಲಿ !
ಸುರಿಯುವ ತುಂತುರು ಮಳೆಯಲಿ !
ಸೂರ್ಯನ ಬೆಳಕಿನ ಕಿರಣಗಳಲ್ಲಿ !
ಚಂದ್ರನ ಹೊಳೆಯುವ ಬೆಳದಿಂಗಳಲಿ !
ಉರಿಯುವ ಸುಂದರ ದೀಪದಲಿ !
ತೆರೆದಿಟ್ಟ ಮನಸಿನ ಭಾವನೆಯಲಿ !
ನೀನೆ ನೀನು . ಎಲಿಲ್ಲು ನೀನೆ ಗೆಳತಿ !
ನೀನು ಹೀಗೆ ನನ್ನ ಕಾಡಿದರೆ ನಾ ಬದಕುವದಾದರೆ ಹೇಗೆ ಗೆಳತಿ ?

ನನ್ನ ಪ್ರೀತಿ ಹೇಗಿರಬೇಕು ಗೊತ್ತೆ…!!




ನನ್ನ ಹೃದಯದಲ್ಲಿರುವ ಪ್ರೀತಿಯ
ಹಣತೆ ನಾನಾದರೆ..
ಅದನ್ನು ಬೆಳಗಿಸುವ ಜ್ಯೋತಿ
ಅವಳಾಗಬೇಕು

ಸುಂದರ ಕನಸುಗಳನ್ನ
ಕಾಣುವ ಕಣ್ಣುಗಳು
ನನ್ನದಾದರೆ…
ಆ ಕಣ್ಣೊಳಗೆ ಕೊರೈಸುವ
ಕಾಂತಿ ಅವಳಾಗಬೇಕು …!

ಆಸೆಗಳು ಕೂಡಿರುವ
ಮುದುಡಿದ ಮೊಗ್ಗು
ನಾನಾದರೆ…
ಮೊಗ್ಗು ಅರಳಿಸುವ
ಮುದ್ದು ಗೆಳತಿ
ಅವಳಾಗಬೇಕು

ನೋವೊಳಗೆ ಅಳುವ
ಮುಗ್ಧ ಮಗು
ನಾನಾದರೆ…
ಅಳುವ ಮರೆಸಿ
ಲಾಲಿ ಹಾಡುವ
ತಾಯಿ ಹೃದಯ ಅವಳಾಗಬೇಕು !!!!
ಮಲ್ಲೇಶ್ ಗೌಡ

ಸೋಮವಾರ, ಜನವರಿ 17, 2011

ಗಣೇಶ ಮಂತ್ರ:

ಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ !